ಧಾರವಾಡ prajakiran.com : ಹೊನ್ನಾಳಿಯ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ಕುರಿತಂತೆಯಾರ ಬಗ್ಗೆಯೂ ನಾನು ವೈಯಕ್ತಿಕ ಪ್ರತಿಕ್ರಿಯೆ ಕೊಡಲಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಯಾವುದೇ ಸಹಿ ಸಂಗ್ರಹ ನಮ್ಮ ಹೈಕಮಾಂಡ್ ಸಹಿಸೋದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಬಿಜೆಪಿಯ 65 ಶಾಸಕರ ಸಹಿ ಸಂಗ್ರಹ ಆಗಿಯೇ ಇಲ್ಲ. ಈ ಹಿಂದೆ ಕೇವಲ ಒಂದೇ ಸಹಿ ಸಂಗ್ರಹ ಆಗಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು,
ಸದನ ನಡೆದಾಗ ಸಹಿ ಮಾಡಿದ್ದೇವೆ
ಗ್ರಾಮೀಣದ ರಸ್ತೆ, ಗ್ರಾಮೀಣ ಭಾಗಕ್ಕೆ ಸಂಬಂಧಿಸಿದ ಶಾಸಕರ ಸಹಿ ಅದು ಎಂದು ಹೇಳಿದರು.
ಅದೇ ಕೊನೆ ಸಹಿ ಸಂಗ್ರಹ.
ಒಂದು ವೇಳೆ ಸಹಿ ಸಂಗ್ರಹ ಮಾಡಿದಲ್ಲಿ ಹೈಕಮಾಂಡ್ನಿಂದ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ, ನಮ್ಮದು ಶಿಸ್ತಿನ ಪಕ್ಷ.
ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ.
ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಕುಟುಕಿದರು.
ಏನೇ ಇದ್ದರೂ ಶಾಸಕಾಂಗ ಸಭೆಯಲ್ಲೇ ಚರ್ಚೆ ಆಗುತ್ತದೆ ಎಂದು ಹೇಳಿದರು.
ಜೊತೆಗೆ ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕು. ಅದನ್ನು ಮಾಡುತ್ತಿರುವೆ ಆದರೆ ಸಿಎಂ ರೇಸಿನ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದು ರೇಣುಕಾಚಾರ್ಯ ಸವಾಲಿಗೆ ಪ್ರತಿಕ್ರಿಯೆ ನೀಡಲು ಶಾಸಕ ಅರವಿಂದ ಬೆಲ್ಲದ ನುಣುಚಿಕೊಂಡರು.