ಬೆಂಗಳೂರು prajakiran.com : ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡ ಇನ್ನೊಬ್ಬ ಶಿಕ್ಷಕಿ ಸಾವನ್ನಪ್ಪಿದ್ದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ರಾಜ್ಯ ಸರಕಾರ ಕೋವಿಡ್ 19 ಕರ್ತವ್ಯಕ್ಕೆ ಸರಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸುತ್ತಿದೆ.
ಆದರೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಇಬ್ಬರು ಶಿಕ್ಷಕಿಯರು ಸಾವನ್ನಪ್ಪಿದ್ದಂತಾಗಿದೆ.
ಒಬ್ಬರು ಬೆಂಗಳೂರು ಉತ್ತರ ವಲಯ 3ರ ಸರಕಾರಿ ಉರ್ದು ಮಾದರಿ ಶಾಲೆ ಡಿ. ಜೆ.ಹಳ್ಳಿಯ ಸಹ ಶಿಕ್ಷಕಿ ಯಾದಂತಹ ಶ್ರೀಮತಿ ದಿಲನಾಜ್ ಬೇಗಂಅವರು ಕರೋನಾ ಪಾಸಿಟಿವ್ ಬಂದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು.
ಇನ್ನೊಬ್ಬರು ಬೆಂಗಳೂರು ಉತ್ತರ ವಲಯ 1ರ ಗಂಗೋಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಉಷಾಅವರು ಕೋವಿಡ್ ಗೆ ಬಲಿಯಾಗಿದ್ದಾರೆ.
ಈ ಇಬ್ಬರು ಶಿಕ್ಷಕರನ್ನು ರಾಜ್ಯ ಸರಕಾರ ಮನೆ ಮನೆ ಕೋವಿಡ್ ಸಮೀಕ್ಷೆಗೆ ನಿಯೋಜಿಸಿತ್ತು. ಇಬ್ಬರು ಕೋವಿಡ್ ಸರ್ವೇಯಿಂದ ಕರೊನಾಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಇದು
ನಿಜಕ್ಕೂ ಗಂಭೀರ ಹಾಗೂ ಕಳವಳಕಾರಿ ಸಂಗತಿಯೆಂದು ರಾಜ್ಯಾದ್ಯಂತ ಶಿಕ್ಷಕ ಸಮುದಾಯಕ್ಕೆ ಸಂಕಷ್ಟ ಹಾಗೂಆತಂಕಕ್ಕೆ ಸಿಲುಕಿಸಿದೆ.
ಶಿಕ್ಷಣ ಇಲಾಖೆ ಆಯುಕ್ತರು ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಬರದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ಒಂದಡೆ ನೀಡುತ್ತಿದೆ.
ಮತ್ತೊಂದಡೆ ಶಿಕ್ಷಕರಿಗೆ ಯಾವುದೇ ವಿಶೇಷ ಸೌಲಭ್ಯವಾಗಲಿ, ಸೌರ್ಕರ್ಯಗಳಾಗಲಿ, ಇಲ್ಲವೇ ಕರೋನಾಕ್ಕೆ ತುತ್ತಾದವರನ್ನು ಉಳಿಸಿಕೊಳ್ಳಲು ಪ್ರತ್ಯೇಕ ಆಸ್ಪತ್ರೆಯಾಗಲಿ, ಮಾಸ್ಕ, ಗ್ಲೋಸ್, ರಜೆ ಸಹಿತ ಕ್ವಾರಂಟಿನ್ ಆಗಲಿ ಒದಗಿಸುತ್ತಿಲ್ಲ. ಇದು ಶಿಕ್ಷಕರ ಮಾನಸಿಕ ಆತ್ಮಸ್ಥೈರ್ಯ ಕುಗ್ಗಿಸುವಂತೆ ಮಾಡಿದೆ.
ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವರನ್ನು ಬೆಂಗಳೂರು ನಗರ ಹಾಗೂ ಜಿಲ್ಲೆಯ ಶಿಕ್ಷಕರು ಖುದ್ದಾಗಿ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲುನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.