ರಾಜ್ಯ

ಹಾನಗಲ್ ಬಳಿ ಪೊಲೀಸ್ ಬ್ರೋಕರ್ ಕಿರಣ್ ಸಿ ಐ ಡಿ ವಶಕ್ಕೆ : ತೀವ್ರಗೊಂಡ ವಿಚಾರಣೆಯಿಂದ ಹಲವರಿಗೆ ಢವ ಢವ….!

ಬೆಳಗಾವಿ prajakiran.com :
ಹುಬ್ಬಳ್ಳಿಯ ಹಾಗೂ ವಿಶೇಷವಾಗಿ ಹೈ ವೇ ದಲಾಲ್ ಆಗಿದ್ದ ಪೊಲೀಸ್
ಬ್ರೋಕರ್ ಕಿರಣ್ ನನ್ನು ಸಿಐಡಿ ಪೊಲೀಸರು ಹಾನಗಲ್ ನಲ್ಲಿ ನಿನ್ನೇಯೇ ವಶಕ್ಕೆ ತೆಗೆದುಕೊಂಡಿದ್ದಾರೆ‌.

ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ನಿನ್ನೆಯಿಂದ ತೀವ್ರ ವಿಚಾರಣೆ ನಡೆಸಿ, ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ ಹಿರಿಯ ಪೊಲೀಸ್ ಅಧಿಕಾರಿ
ಜೊತೆಗೆ ಸೇರಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4.9 ಕೆಜಿ ಚಿನ್ನ ಕದ್ದ ಪ್ರಕರಣದಲ್ಲಿ ಕಿಂಗ್ ಪಿನ್ ಎಂದು ಹೇಳಲಾಗಿತ್ತು.

ಬೆಳಗಾವಿ ಜಿಲ್ಲೆಯ ಹಿಂದಿನ ಹಿರಿಯ ಪೊಲೀಸ್ ಅಧಿಕಾರಿ ಸಹಾಯ ಪಡೆದು ಯಮಕನಮರಡಿ ಠಾಣಾ‌ ವ್ಯಾಪ್ತಿ ಕಾರ ಬಿಡಿಸಲು 27 ಲಕ್ಷಕ್ಕೆ ಡೀಲ್ ಕುದುರಿಸಿದ್ದ.

ಆದರೆ ಪ್ತಕರಣ ದಾಖಲಾಗಿದ್ದರಿಂದ ಪಿಎಸ್ ಐ ರಮೇಶ‌ ಪಾಟೀಲ ಎರ್ಟಿಗಾ ಕಾರ್ ಬಿಟ್ಟು ಕಳುಹಿಸಿರಲಿಲ್ಲ.

ಆನಂತರ ಡಿಎಸ್ಪಿ ಸಹಾಯದಿಂದ ಕಾರಿನ ಎರ್ ಬ್ಯಾಗ್ ನಲ್ಲಿದ್ದ 4.9 ಕೆಜಿ ಚಿನ್ನ ಯಾಮಾರಿಸಿದ್ದ

ಅದನ್ನು ಹುಬ್ಬಳ್ಳಿಯ ಜೆಪಿ ಅಲಿಯಾಸ್ ಜರ್ನಾದನ ಎಂಬಾತನಿಗೆ ಮಾರಾಟ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು.

ಪ್ರಕರಣ ಸಿಐಡಿಗೆ ವರ್ಗಗೊಂಡ ಬೆನ್ನಲ್ಲೇ ಹುಬ್ಬಳ್ಳಿಯಿಂದ ತಲೆ ಮರೆಸಿಕೊಂಡಿದ್ದ ಕಿರಣ್ ನನ್ನು ಹಾನಗಲ್ ನಲ್ಲಿ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಬೆಳಗಾವಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸಿಐಡಿ ಅಧಿಕಾರಿಗಳು ವಿಚಾರಣೆ ಮುಗಿದ ಬಳಿಕ‌ ಬಂಧನದ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ.

ಕಾರ್ ಮಾಲೀಕ ಮಂಗಳೂರು ಮೂಲದ
ತಿಲಕ್ ಪೂಜಾರಿ ಹೇಳಿಕೆ ಆಧರಿಸಿ ಕಿರಣ್ ವಶಕ್ಕೆ ತೆಗೆದುಕೊಂಡ ಸಿಐಡಿ
ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಶಾಕ್ ನೀಡ್ತಾರಾ ಎಂಬುದು ಕಾದು‌ನೋಡಬೇಕು.

ಹಿರಿಯ ಪೊಲೀಸ್ ಅಧಿಕಾರಿಗಳ‌ ಜೊತೆಗೆ ಸೇರಿ ಚಿನ್ನಕದ್ದಿರುವ ಬಗ್ಗೆ ಕಿರಣ್ ಬಾಯ್ಬಿಟ್ಟ‌ರೆ ಅವರಿಗೂ ಸಂಕಟ ಕಟ್ಟಿಟ್ಟ ಬುತ್ತಿ.

ಚಿನ್ನ ಕಳ್ಳತನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕಿರಣ್ ಗೆ ಸಾಥ್ ನೀಡಿದ್ದರು ಎಂಬ‌ ವಿಚಾರ ಸಿಐಡಿ‌ ತನಿಖೆ‌ ವೇಳೆ ಬಯಲಾಗಿತ್ತು ಎಂದು  ಹೇಳಲಾಗಿದೆ.

ಹೀಗಾಗಿ ಪೊಲೀಸ ಬ್ರೋಕರ್ ಕಿರಣ್ ನ ಒಂದೊಂದೇ ಕಹಾನಿ ಕೇಳಿ ದಂಗಾದ ಸಿಐಡಿ ಅಧಿಕಾರಿಗಳು ಆತನ ಸಂಪರ್ಕದಲ್ಲಿದ್ದ ೧೦ ಕ್ಕೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆ ನಡೆಸಿದರೆ ಎಂಬ ಡವಡವ….!ಶುರುವಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾಗಿದ್ದ‌ ಕಿರಣ್, ಪೊಲೀಸ್ ಅಧಿಕಾರಿಗಳಿಗೆ ಹಣದ ಆಮಿಷ ತೋರಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.

ಬಳಿಕ ಅವರನ್ನು ಇಟ್ಕೋಂಡು ‌ಆಡಿದ್ದೆ ಆಟ ಎನ್ನುವಂತಾಗಿತ್ತು.  ಈಗ ಸಿಐಡಿಯ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಈ ಕುರಿತು ಪೊಲೀಸ್ ಹಕ್ಕುಗಳ ಹೋರಾಟಗಾರ ಧಾರವಾಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಬಸವರಾಜ ಹೆಚ್. ಕೊರವರ ಪೊಲೀಸ್ ಮಹಾನಿರ್ದೇಶಕರಿಗೆ ನಾಲ್ಕು ಪುಟಗಳ ಸಮಗ್ರ ಪತ್ರ ಆತನ‌ ಕರಾಳ ದಂಧೆಯ ಕುರಿತು ಅನಾವರಣಗೊಳಿಸಿದ್ದರು.

ಅಲ್ಲದೆ, ಸಂಪೂರ್ಣ ತನಿಖೆ ನಡೆಸಿ, ಇಲಾಖೆಯ ಕಪ್ಪು ಚುಕ್ಕೆಯನ್ನು ಸರಿಪಡಿಸಿವಂತೆ ಒತ್ತಾಯಿಸಿದ್ದನ್ನು  ಇಲ್ಲಿ ಸ್ಮರಿಸಬಹುದು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *