ರಾಜ್ಯ

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ರಾತ್ರೋ ರಾತ್ರಿ ವೇಳಾಪಟ್ಟಿ ಬದಲಿಸಿದ ಕವಿವಿ

ಧಾರವಾಡ prajakiran.com : ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಎಂ ಎ ಕನ್ನಡ ಹಾಗೂ ಎಂ ಎ ಇತಿಹಾಸ ಪ್ರವೇಶ ಪರೀಕ್ಷೆ ಎಕಕಾಲಕ್ಕೆ ನಿಗದಿಪಡಿಸಿದ್ದರಿಂದ ನೂರಾರು ವಿದ್ಯಾರ್ಥಿಗಳು ಕಂಗಲಾಗಿದ್ದರು. ಇದರಿಂದ ದಿಕ್ಕೆಟ್ಟ ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ಮೊರೆ ಹೋಗಿದ್ದರು. ಬೆಂಗಳೂರಿನಲ್ಲಿದ್ದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಿಸಿ ಅವರು ತಕ್ಷಣ ಸ್ಪಂದಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾತ್ರೋ ರಾತ್ರಿ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದರು. ಇದರಿಂದ ನೆಮ್ಮದಿಯ […]

ರಾಜ್ಯ

ಬಿ ಎಡ್ ವಿದ್ಯಾರ್ಥಿಗಳಿಗೆ ಮುಗಿಯದ ಪರೀಕ್ಷೆ ಸಂಕಷ್ಟ

ಪರೀಕ್ಷೆ ಬರೆಯಬೇಕೆ ಬೇಡವೇ ಎಂಬ ಗೊಂದಲ ಧಾರವಾಡ prajakiran.com : ಕರೋನಾ ಹಿನ್ನಲೆಯಲ್ಲಿ ಪರೀಕ್ಷೆ ಇಲ್ಲದೆ ಮುಂದಿನ ವರ್ಗಗಳಿಗೆ ಬಡ್ತಿ ಪಡೆದಿರುವ ಬಿ ಎಡ್ ಮೊದಲ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೊಂದಲ ಮತ್ತೆ ಮುಂದುವರೆದಿದೆ. ಬಿ ಎಡ್ 1 ಹಾಗೂ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮುಂದಿನ ವರ್ಗಕ್ಕೆ ಬಡ್ತಿಗೊಳಿಸುವ ಕುರಿತು ಕರ್ನಾಟಕ ರಾಜ್ಯ ಸರಕಾರದ ನಿರ್ದೇಶನದಂತೆ ಹಾಗೂ ಸೆ. 9ರಂದು ನಡೆದ ಕರ್ನಾಟಕ ವಿಶ್ವವಿದ್ಯಾಲಯ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ  ನಿರ್ಣಯಿಸಿದಂತೆ ಎಲ್ಲಾವಿದ್ಯಾರ್ಥಿಗಳಿಗೆ […]

ರಾಜ್ಯ

ಕೊನೆಗೂ ಬಿ ಎಡ್ ಪರೀಕ್ಷೆ ಮುಂದೂಡಿದ ಕರ್ನಾಟಕ ವಿಶ್ವವಿದ್ಯಾಲಯ

ಧಾರವಾಡ prajakiran.com : ಗೊಂದಲದ ಗೂಡಾಗಿರುವ ಬಿ ಎಡ್ ಪರೀಕ್ಷೆಗಳನ್ನು ಕೊನೆಗೂ  ಕರ್ನಾಟಕ ವಿಶ್ವವಿದ್ಯಾಲಯ ಮುಂದೂಡಿದೆ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರನಾಥ ಕದಂ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ. ಈ ಕುರಿತು ಪ್ರಜಾಕಿರಣ.ಕಾಮ್  ದೊಂದಿಗೆ ಮಾತನಾಡಿದ ಅವರು, ಸೆ. 11ರಿಂದ 19ರವರೆಗೆ ನಡೆಯಬೇಕಿದ್ದ ಬಿ ಎಡ್ ಪರೀಕ್ಷೆ ಸದ್ಯಕ್ಕೆ ಮುಂದೂಡಲಾಗಿದೆ.ಸೆ. 21ರ ನಂತರ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದರು. ಬಿ ಎಡ್ ಪೂರಕ ಪರೀಕ್ಷೆಗಳ ಜೊತೆಗೆ ಈ ಬಾರಿ ಹೊಸ ಪರೀಕ್ಷೆ ನಡೆಸುವ ಬಗ್ಗೆಯೂ […]

ರಾಜ್ಯ

ಸೆ. 11ರ ಬಿ ಎಡ್ ಪರೀಕ್ಷೆ ಮುಂದೂಡಲು ಕರ್ನಾಟಕ ವಿಶ್ವವಿದ್ಯಾಲಯ ನಿರ್ಧಾರ…!?

ವಿದ್ಯಾರ್ಥಿಗಳ ಮಿಂಚಿನ ಪ್ರತಿಭಟನೆ ಹಿನ್ನಲೆ ಪ್ರತಿಭಟನಾನಿರತರಿಗೆ ಕುಲಪತಿ ಮೌಖಿಕ ಭರವಸೆ ಧಾರವಾಡ prajakiran.com :  ಸೆ. 11ರಿಂದ 19ರವರೆಗೆ ನಡೆಯಬೇಕಿದ್ದ ಬಿ ಎಡ್ ಪ್ರಥಮ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಲು ಕರ್ನಾಟಕ ವಿಶ್ವವಿದ್ಯಾಲಯ ನಿರ್ಧರಿಸಿದೆ. ಶನಿವಾರ (ಸೆ.5ರಂದು) ನೂರಾರು ವಿದ್ಯಾರ್ಥಿಗಳು ಮಿಂಚಿನ ಪ್ರತಿಭಟನೆ  ನಡೆಸಿ ತಮ್ಮಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ಕುರಿತು ಪ್ರತಿಭಟನಾನಿರತರರಿಗೆ ಕವಿವಿ ಕುಲಪತಿ ಡಾ. ವಿಶ್ವನಾಥ ಎಂ. ಮೌಖಿಕ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಾವಿರಾರು ಬಿಎಡ್ ವಿದ್ಯಾರ್ಥಿಗಳು ಹಾಗೂ ಬಿ […]

ರಾಜ್ಯ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ಬಾರಿಯೂ ಪ್ರಭಾರಿಕುಲಪತಿ

ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರ ನಾಲ್ಕನೇ ಬಾರಿಯೂ ಪ್ರಭಾರಿ ಕುಲಪತಿಯ ನೇಮಕವಾಗಿದೆ. ಈ ಹಿಂದಿನ ಕುಲಪತಿ ಪ್ರಮೋದ ಗಾಯಿಯವರ ಅವಧಿ ಪೂರ್ಣಗೊಂಡ ನಂತರ ಶಿರಾಳಶೆಟ್ಟಿಯವರನ್ನು ನೇಮಿಸಲಾಗಿತ್ತು. ಅವರ ನಂತರ ಪ್ರೊ ಟಿ.ಎಂ. ಭಾಸ್ಕರ್ ಅವರನ್ನು ನೇಮಿಸಲಾಗಿತ್ತು. ಅವರ ಬಳಿಕ ಶಿವಪ್ಪಅವರನ್ನು ನೇಮಿಸಲಾಗಿತ್ತು.   ಇದೀಗ ನೂತನ ಪ್ರಭಾರಿ (ನಾಲ್ಕನೇ ) ಕುಲಪತಿಗಳಾಗಿ ಪ್ರೊ. ವಿಶ್ವನಾಥ ಎಂ., ಅವರನ್ನು ರಾಜ್ಯಪಾಲರು ನೇಮಕ ಮಾಡಲಾಗಿದೆ. ಆ. ೨೯ ರಂದು ಪ್ರಭಾರಿ ಕುಲಪತಿಯವರಾದ ಪ್ರೊ. ಶಿವಪ್ಪ […]

ರಾಜ್ಯ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮೂರನೇ ಪ್ರಭಾರಿ ಕುಲಪತಿ …!

ಧಾರವಾಡ prajakiran.com : ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದುಗುರುತಿಸಿಕೊಂಡಿರುವ ಧಾರವಾಡದ  ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸತತವಾಗಿ ಮೂರನೇ ಪ್ರಭಾರಿ ಕುಲಪತಿಗಳು ನಿನ್ನೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಪ್ರೊ. ಪ್ರಮೋದ ಗಾಯಿ ಅವರು ನಿವೃತ್ತರಾದ ನಂತರಅವರ ಸ್ಥಾನಕ್ಕೆ ಹಿರಿಯ ಪ್ರಾಧ್ಯಾಪಕರೆಂಬ ಸೇವಾ ಹಿರಿತನ ಆಧಾರದ ಮೇಲೆ ಪ್ರೊ. ಶಿರಾಳಶೆಟ್ಟಿ ಅವರನ್ನು ನೇಮಿಸಲಾಗಿತ್ತು. ಅವರ ಸೇವಾ ನಿವೃತ್ತಿ ನಂತರಅವರ ಜಾಗಕ್ಕೆ ಡಾ. ಟಿ.ಎಂ. ಭಾಸ್ಕರ ಅವರನ್ನು ನಿಯೋಜಿಸಲಾಗಿತ್ತು. ಇದೀಗಅವರ ಸೇವಾ ನಿವೃತ್ತಿ ನಂತರ ಮೂರನೇ ಪ್ರಭಾರಿ ಕುಲಪತಿಗಳಾಗಿ ಪ್ರೊ. […]