ಧಾರವಾಡ prajakiran.com : ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಎಂ ಎ ಕನ್ನಡ ಹಾಗೂ ಎಂ ಎ ಇತಿಹಾಸ ಪ್ರವೇಶ ಪರೀಕ್ಷೆ ಎಕಕಾಲಕ್ಕೆ ನಿಗದಿಪಡಿಸಿದ್ದರಿಂದ ನೂರಾರು ವಿದ್ಯಾರ್ಥಿಗಳು ಕಂಗಲಾಗಿದ್ದರು.
ಇದರಿಂದ ದಿಕ್ಕೆಟ್ಟ ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ಮೊರೆ ಹೋಗಿದ್ದರು.
ಬೆಂಗಳೂರಿನಲ್ಲಿದ್ದ ಕವಿವಿ ಕುಲಪತಿ ಡಾ. ಕೆ.ಬಿ. ಗುಡಿಸಿ ಅವರು ತಕ್ಷಣ ಸ್ಪಂದಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾತ್ರೋ ರಾತ್ರಿ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದರು.
ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು ಬದಲಾದ ಸಮಯದಲ್ಲಿ ಎರಡು ಪ್ರವೇಶ ಪರೀಕ್ಷೆ ಬರೆದು ಸಮಾಧಾನ ಪಟ್ಟುಕೊಂಡರು.
ಅಲ್ಲದೆ, ಕವಿವಿ ಕ್ರಮಕ್ಕೆ ಮುಕ್ತ ಕಂಠದಿಂದ ಶ್ಲಾಘಿಸಿದರು. ತಕ್ಷಣ ವಿವಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವುದು ಸಕರಾತ್ಮಕ ಬೆಳವಣಿಗೆಯಾಗಿದೆ.