ಬೆಳಗಾವಿ prajakiran.com : ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವದಿಂದ ಜೋರಾದ ಗಾಳಿ-ಮಳೆ ಆಗುತ್ತಿದ್ದು, ಹಲವೆಡೆ ಗಿಡ-ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ತೌಕ್ತೆ ಚಂಡಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಕುಂದಾನಗರಿಗೂ ಅದರ ಶಾಖ ತಟ್ಟಿದೆ.
ಬೆಳಗ್ಗೆಯಿಂದಲೂ ಜೋರಾದ ಗಾಳಿ ಬೀಸುತ್ತಿದೆ. ಜಿಲ್ಲೆಯ ಬಹುತೇಕ ಕಡೆಗೆ ಮಳೆ ಆಗುತ್ತಿದ್ದು, ಮಳೆ ಅಬ್ಬರ ಜೋರಾಗಿದೆ.
ಕೋವಿಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಖರೀದಿಗೆ ಬಂದ ಗ್ರಾಹಕರು ಮತ್ತು ಮಾರಾಟಕ್ಕೆ ಬಂದಿದ್ದ ವ್ಯಾಪಾರಸ್ಥರು ತೀವ್ರ ತೊಂದರೆ ಪಡುವಂತಾಯಿತು.