ಹಾವೇರಿ ಪ್ರಜಾಕಿರಣ.ಕಾಮ್ : ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪಟಾಕಿ ಅಂಗಡಿಯೊಂದು ಸುಟ್ಟು ಹೋದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಭೂಮಿಕಾ ಟ್ರೇಡರ್ಸ್ ಎಂಬ ಪಟಾಕಿ ಅಂಗಡಿಯೇ ಸುಟ್ಟು ಕರಕಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಕಂಡು ಸ್ಥಳೀಯರು ಕೆಲ ಕಾಲ ಭಯಭೀತಗೊಂಡು ಆತಂಕಗೊಂಡಿದ್ದರು.
ಅಂಗಡಿ ಕೆಳಗಡೆ ಇದ್ದ ಬೈಕ್ ಹಾಗೂ ಟಾಟಾ ಏಸ್ ಗಾಡಿ ಸುಟ್ಟು ಭಸ್ಮವಾಗಿವೆ.
ಈ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿವೆ. ಮೃತರು ಹಾವೇರಿಯ ಕಾಟೇನಹಳ್ಳಿಯ, ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ ಹಾಗೂ ಶಿವಲಿಂಗ ಅಕ್ಕಿ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ಕಾಣೆಯಾಗಿರುವ ಕಾರ್ಮಿಕರ ಶೋಧಕಾರ್ಯ ಮುಂದುವರೆದಿದೆ.
ವೀರೇಶ ಸಾತೇನಹಳ್ಳಿ ಎಂಬುವವರಿಗೆ ಸೇರಿದ್ದ ಪಟಾಕಿ ಅಂಗಡಿ ಎಂದು
ಗೊತ್ತಾಗಿದೆ.
ಸ್ಥಳಕ್ಕೆ ದೌಡಾಯಿಸಿದ 8 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸತತ ಐದು ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ನಡೆಸಿದರು.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರೆದಿದೆ.