ಧಾರವಾಡ ಪ್ರಜಾಕಿರಣ.ಕಾಮ್ : ಮನೆ ಮಾಲೀಕರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡಿ-ಬಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಕುಖ್ಯಾತ ಚೀಟರ್ ಮೋನ್ಯಾ ಅಲಿಯಾಸ್ ಮೋಹನ ವಾಳ್ವೇಕರನನ್ನ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಹೊಯ್ಸಳ ನಗರದ ಮನೆಯೊಂದರ ಪಾರ್ಕಿಂಗ್ ಜಾಗದಲ್ಲಿ ಕಾರನ್ನ ನಿಲ್ಲಿಸಿದ್ದನ್ನ ಮಾಲೀಕರು ಪ್ರಶ್ನಿಸಿದಾಗ ಮೋಹನ ಸೇರಿದಂತೆ ಆತನ ಎರಡು ಮಕ್ಕಳು ಹಾಗೂ ಮಡದಿ
ಹಲ್ಲೆ ಮಾಡಿದ್ದರು.
ಹಲ್ಲೆಯಲ್ಲಿ ಬಾಡಿಗೆದಾರ ವಿದ್ಯಾರ್ಥಿ ಹೃಷಕೇಶ ತಾಂಗಡೆ, ಮನೆಯ ಮಾಲೀಕ ರೋಹನ ಕಲಗಾರ ಗಾಯಗೊಂಡಿದ್ದರು.
ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆನಂತರ ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ವೆಕರ್ ಹಾಗೂ ಕುಟುಂಬದ ಸದಸ್ಯರಾದ ಯುವರಾಜ, ದೇವರಾಜ ಹಾಗೂ ಮಮತಾ ವಾಳ್ವೇಕರ ತಲೆ ಮೆರೆಸಿಕೊಂಡಿದ್ದರು.
ಇದೀಗ ಒಬ್ವನ ಬಂಧನದ ಬೆನ್ನಲ್ಲೇ ಇನ್ಬುಳಿದವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಗೋಕಾಕಗೆ ತೆರಳಿ ಬಂಧಿಸಿ ಕರೆ ತಂದಿದ್ದಾರೆ ಎನ್ನಲಾಗಿದೆ.