ರಾಜ್ಯ

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೇಟ್ ವಂಚಿತರಿಂದ ಬಂಡಾಯದ ಬಾವುಟ …..!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಟಿಕೇಟ್ ಪಡೆಯಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದ ನಡೆಸಿದ ಹಲವು ಟಿಕೇಟ್ ಸಿಗದಿದ್ದಾಗ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅಖಾಡಕ್ಕೆ ಇಳಿದಿದ್ದಾರೆ.

ಅಭ್ಯರ್ಥಿಗಳ ಮನವೊಲಿಸಲು ಮುಖಂಡರು ಪ್ರಯತ್ನಿಸುತ್ತಿದ್ದಾರೆ.

ವಾರ್ಡ್ ನಂಬರ್ ಒಂದರಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಸರಸ್ವತಿ ಭಂಗಿ, ಎರಡನೇ ವಾರ್ಡ್ ನಿಂದ ಮನೋಹರ ನಾಯ್ಕ ಅವರ ಪತ್ನಿ, ಮೂರನೇ ವಾರ್ಡ್ ನಿಂದ ಮಂಜುನಾಥ ಚೋಳಪ್ಪನವರ, ಮಂಜುನಾಥ ನಡಟ್ಟಿ, ನಾಲ್ಕನೇ ವಾರ್ಡ್ ನಿಂದ ಇನ್ನೂ ಸ್ಪಷ್ಟವಾದ ಚಿತ್ರಣವಿಲ್ಲ.

ಐದನೇ ವಾರ್ಡ್ ಸೂರಜ್ ಪುಡಕಲಕಟ್ಟಿ ಹಾಗೂ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿ ವಿಠ್ಠಲ ಚವ್ಹಾಣ ಅಭ್ಯರ್ಥಿ ಯಾಗಿದ್ದಾರೆ.

ವಾರ್ಡ್ ಎಂಟರಿಂದ ಬಂಡಾಯ ಅಭ್ಯರ್ಥಿ ಯಾಗಿ ಮಂಜುನಾಥ ಹಿರೇಮಠ, ಒಂಬತ್ತನೇ ವಾರ್ಡ ನಿಂದ ಬಿಜೆಪಿ ಮಹಿಳಾ ಮುಖಂಡರೊಬ್ಬರು ಅಖಾಡಕ್ಕೆ ಇಳಿದಿದ್ದಾರೆ‌.

ವಾರ್ಡ್ ನಂಬರ್ ಒಂದರಿಂದ ನಿರ್ಮಲಾ ಹೊಂಗಲ್ ಅವರಿಗೆ ಟಿಕೇಟ್ ನೀಡಿದ್ದರಿಂದ ಇನ್ನೊಬ್ಬ ಆಕಾಂಕ್ಷಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಸುರೇಖಾ ಪರಮೇಶ್ವರ ಮೇದಾ ಅಭ್ಯರ್ಥಿ ಆಗಿದ್ದಾರೆ.

ವಾರ್ಡ್ ಒಂದರ ಬಿಜೆಪಿ ಪ್ರಬಲ ಆಕಾಂಕ್ಷಿ ಆಗಿದ್ದ ರಾಜೇಶ್ವರಿ ಸಾಲಗಟ್ಟಿ ಅವರು ಬಂಡಾಯದ ಬಾವುಟ ಹಾರಿಸುವುದನ್ನು ಅರಿತು ಅವರಿಗೆ ವಾರ್ಡ್ ನಂಬರ್ ಒಂದರಿಂದ ಹದಿನಾರಕ್ಕೆ ಸ್ಥಳಾಂತರ ಮಾಡಲಾಗಿದೆ.

ಬಿಜೆಪಿ ಕಾಂಗ್ರೆಸ್ ಹಲವು ಟಿಕೇಟ್ ವಂಚಿತರು ಬಂಡಾಯದ ಬಾವುಟ
ಹಾರಿಸಿದ್ದಾರೆ.

ರಾಜಕೀಯ ಜಿದ್ದಾಜಿದ್ದಿಗೆ ಅಖಾಡ ಸಜ್ಜು ಗೊಂಡಿದ್ದು ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮುಂದಿನ‌ ನಡೆ ತೀವ್ರ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *