ರಾಜ್ಯ

ವಾರ್ಡ್ ನಂಬರ ಒಂದರಿಂದ ಪಕ್ಷೇತರ ಅಭ್ಯರ್ಥಿ ಆಗಿ ಜಯಶ್ರೀ ಪವಾರ ಕಣಕ್ಕೆ : ಬಸವರಾಜ ಕೊರವರ ಗೆಳೆಯರ ಬಳಗದ ಬೆಂಬಲ

ಧಾರವಾಡ prajakiran.com : ಧಾರವಾಡದ ಹಲವು ಪ್ರಮುಖ ಬಡಾವಣೆಗಳನ್ನು ಹೊಂದಿರುವ ವಾರ್ಡ್ ನಂಬರ್ ಒಂದು ಧಾರವಾಡ ಗ್ರಾಮೀಣ ಶಾಸಕರ ಮನೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಆಗಿದೆ.
ಈ ವಾರ್ಡ್ ನಲ್ಲಿ ಜಯಶ್ರೀ ಪವಾರ (ನಾಯಕವಾಡ) ಅವರು ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿದಿದ್ದಾರೆ.

ಇವರಿಗೆ ಜನಜಾಗೃತಿ ಸಂಘದ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರು ಆಗಿರುವ ಪೊಲೀಸ್ ಹಕ್ಕುಗಳ ಹೋರಾಟಗಾರ
ಬಸವರಾಜ ಕೊರವರ ಗೆಳೆಯರ ಬಳಗದ ಬೆಂಬಲ ಆನೆ ಬಲತಂದುಕೊಟ್ಟಂತಾಗಿದೆ.

ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ಮಾಡಿರುವ ಬಸವರಾಜ ಕೊರವರ ಮನೆ ಮನೆಗೆ ತೆರಳಿ ಪೊಲೀಸ್ ಕುಟುಂಬದ ಸದಸ್ಯರು ಜಯಶ್ರೀ ಪವಾರ ನಿಮ್ಮ ‌ಮನೆ‌ಮಗಳು. ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವಿದೆ. ಅವರಿಗೆ ಮತ ನೀಡುವಂತೆ ಕೋರಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಮತದಾರರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ಗೆಲುವಿನ ವಿಶ್ವಾಸ ವಿದೆ.

ನಾವು ಕಳೆದ ಹಲವು ವರ್ಷಗಳ ಕಾಲ ನಿರಂತರವಾದ ಹೋರಾಟದ ಮೂಲಕ ಹಲವು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದು, ಈ ಬಾರಿ ಪಾಲಿಕೆ ಯಲ್ಲಿ‌ ನಮ್ಮ ಪ್ರಬಲ ಧ್ವನಿಯಾಗಿ ಜಯಶ್ರೀ ಪವಾರ ನಿಲ್ಲಲಿದ್ದಾರೆ ಎಂದು ಬಸವರಾಜ ಕೊರವರ ಹೇಳಿದರು.

ವಾರ್ಡ್ ನಲ್ಲಿ ಇನ್ನು ಹಲವು ಸಮಸ್ಯೆಗಳಿವೆ. ಹೋರಾಟದ ಜೊತೆಗೆ ನಿಲ್ಲುವ ಮಹಾನಗರ ಪಾಲಿಕೆ ಸದಸ್ಯರ ಅಗತ್ಯವಿದೆ.

ಹೀಗಾಗಿ ಯಾವುದೇ ರಾಷ್ಟ್ರೀಯ ಪಕ್ಷದ ಜೊತೆಗೆ ಹೋಗದೆ ಪಕ್ಷೇತರ ಅಭ್ಯರ್ಥಿಯನ್ನು ಜನತೆ ಬೆಂಬಲಿಸಿದ್ದಾರೆ ಎಂಬ ಆಶಾ ಭಾವನೆ ನಮ್ಮದು ಎಂದು ಬಸವರಾಜ ಕೊರವರ ತಿಳಿಸಿದರು.

ಜಯಶ್ರೀ ಪವಾರ ಮಾತನಾಡಿ, ನಾನು ಸ್ಥಳೀಯ ರಾಗಿದ್ದರಿಂದ ಜನರ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಜನರ ಸಮಸ್ಯೆಗೆ ಧ್ವನಿಯಾಗುವೆ.

ಬಸವರಾಜ ಕೊರವರ ಗೆಳಯರ ಬಳಗದ ಬೆಂಬಲ ನನಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *