ಧಾರವಾಡ prajakiran.com : ಧಾರವಾಡದ ವಕೀಲರು ಹಾಗೂ ನವನಗರ ಪೊಲೀಸರ ನಡುವೆ ಗಲಾಟೆ ರಾಜಿ ಸಂಧಾನದಲ್ಲಿ ಅಂತ್ಯಗೊಂಡಿದೆ.
ವಕೀಲ ವಿನೋದ ಪಾಟೀಲ
ಪ್ರಕರಣವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ನಡುವೆ ನ.26ರ-ಗುರುವಾರ ರಾತ್ರಿ ವಾಗ್ವಾದ ಗಲಾಟೆ, ಹಿರಿಯ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿದೆ.
ಹುಬ್ಬಳ್ಳಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್
ಪ್ರಭು ಸೂರೀನ್ ಮತ್ತು ವಕೀಲ ವಿನೋದ ಪಾಟೀಲ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಕೀಲರ ಸಂಘದಲ್ಲಿ ಸತತ ಹಲವು ಗಂಟೆಗಳ ಕಾಲ
ರಾಜಿ ಸಂಧಾನ ಸಭೆ ನಡೆದಿದೆ.
ಈ ಸಭೆಯಲ್ಲಿ ನವನಗರ ಠಾಣೆ ಸಿಪಿಐ ಪ್ರಭು ಸೂರಿನ್ ಕ್ಷಮೆ ಕೇಳಿದ್ದು, ಇದೊಂದು ಉದ್ದೇಶ ಪೂರ್ವಕವಾದ ಘಟನೆಯಲ್ಲ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆಂದು ಕ್ಷಮೆ ಕೇಳಿದರು.
ಡಿಸಿಪಿ ಬಸರಗಿ ಮತ್ತು ವಕೀಲರ ಸಂಘದ ಅಧ್ಯಕ್ಷರ ಮುಂದಾಳತ್ವದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು,ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ವಕೀಲರ ಸಂಘ ನಿರ್ಧರಿಸಿದ್ದನ್ನು ರಾಜಿ ಸಂಧಾನದ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನ.26 ರಂದು ಘಟನೆ : ನವನಗರದ ಕರ್ನಾಟಕ ಸರ್ಕಲ್ನಲ್ಲಿ ವಕೀಲ ವಿನೋದ್ ಪಾಟೀಲ್, ಪ್ರವೀಣ ಪೂಜಾರಿ ಹಾಗೂ ಮಲ್ಲಯ್ಯ ಹಿರೇಮಠ ನಡುವೆ ಜಗಳ ನಡೆದಿತ್ತು.
ಈ ವಿಷಯ ಗೊತ್ತಾಗಿ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಮತ್ತು ಇತರೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರು ಮತ್ತು ವಕೀಲ ವಿನೋದ್ ನಡುವೆ ಚಕಮಕಿ ನಡೆದಿತ್ತು.