ರಾಜ್ಯ

ಗದಗನಲ್ಲಿ ಮಳೆರಾಯನ ಅವಾಂತರಕ್ಕೆ ರಾತ್ರಿಯಿಡಿ ಜಾಗರಣೆ

ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆ

ನೀರಲ್ಲೇ ರಾತ್ರಿಯಿಡೀ ಕಳೆದ ಜನತೆ

ಗದಗ : ರಾತ್ರಿಯಿಡೀ ಸುರಿದ ರಣ ಮಳೆಯಿಂದಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಲವಡೆ ಅನೇಕ ಅವಾಂತರ ಸೃಷ್ಟಿಯಾಗಿವೆ.

ಇದರಿಂದಾಗಿ ತಾಲೂಕಿನ ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆಯಂತಾಗಿದೆ.
ತಾಂಡಾದ ಅನೇಕ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ರಾತ್ರಿಯಿಡೀ ಗ್ರಾಮಸ್ಥರು ಹೈರಾಣಾಗಿದ್ದಾರೆ.

ತಡರಾತ್ರಿಯಿಂದ ನಸುಕಿನ ಜಾವದವರೆಗೂ ಸುರಿದ ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಮಕ್ಕಳು, ವೃದ್ಧರು, ಮಹಿಳೆಯರು ನೀರಲ್ಲೇ ರಾತ್ರಿಯಿಡೀ ಕಳೆದ ಪರದಾಡಿದ್ದಾರೆ.

ಗೃಹ ಉಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಇನ್ನು ಜಮೀನುಗಳಿಗೂ ನುಗ್ಗಿದ ಮಳೆ ನೀರು ಅಪಾರ ಬೆಳೆ ನಾಶವಾಗಿದೆ.

ಜಲ್ಲಿಗೇರಿ, ಕಡಕೋಳ, ವರವಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಒಟ್ನಲ್ಲಿ ವರುಣನ ಅಟ್ಟಹಾಸಕ್ಕೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅನೇಕ ಗ್ರಾಮಗಳ ಜನ್ರು ನಲುಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *