ಯಾದಗಿರಿ prajakiran.com : ಅಧಿಕ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಹತ್ತಿ ಬೆಳೆ ಕೊಳೆತಿರುವುದರಿಂದ ಮನ ನೋಂದು ರೈತನೊಬ್ಬ ಆತ್ಮಹತ್ಯೆ ದಾರಿ ತುಳಿದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಕೀಮಿನಾಶಕ ಸೇವಿಸಿ ರೈತನೋಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಅನಕಸೂಗೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ದೇವಪ್ಪ ದೇವದುರ್ಗ (50) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಅನಕಸೂಗೂರು ಗ್ರಾಮದ ಸರ್ವೆ ನಂ 50ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದ
ರೈತ ಹತ್ತಿ ಬೆಳೆ ಬೆಳೆಯುವುದಕ್ಕೆ ಬೀಜ, ಗೊಬ್ಬರಕ್ಕೆಂದು ವ್ಯವಸಾಯ ಸಹಕಾರ ಸಂಘ (ಅಂಜುಮನ್) ಬ್ಯಾಂಕ್ ನಲ್ಲಿ 1.50.ಲಕ್ಷ ರೂ. ಸಾಲ ಜೊತೆಗೆಊರಲ್ಲಿ ಕೂಡ ಅಲ್ಲಲ್ಲಿ 2.50 ಲಕ್ಷ ರೂ. ಕೈಸಾಲ ಮಾಡಿದ್ದ.
ಈ ವಷ೯ ಹತ್ತಿ ಬೆಳದಿದ್ದು ವಿಪರೀತ ಮಳೆಯಾಗಿ ಹೊಲದಲ್ಲಿ ನೀರು ನಿಂತಿದ್ದರಿಂದ ಹತ್ತಿ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿದ್ದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೀಜ-ಗೊಬ್ಬರ, ಸಂಸಾರಕ್ಕೆ ಎಂದು ಮಾಡಿದ ಸಾಲ ಹೇಗೆ ತೀರಿಸುವುದು ಹತ್ತಿ ಬೆಳೆ ಸರಿಯಾಗಿ ಬೆಳೆದರೆ ಮಾಡಿದ ಸಾಲ ತಿರಿಸಬೇಕೆಂದುಕೊಂಡಿದ್ದರು.
ಇದರಿಂದ ಸಾಲದ ಬಾಧೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಮನನೊಂದು ದೇವಪ್ಪ ತಂದೆ ರಾಜಪ್ಪ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ.
ಅವರನ್ನು ಕೂಡಲೇ ಶಹಾಪುರ ತಾಲೂಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿದ್ದಾರೆ ಎಂದು ಮೃತನ ಹೆಂಡತಿ ನಾಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ವರದಿ : ರಾಘವೇಂದ್ರ ಮಾಸ್ತರ, ಯಾದಗಿರಿ