ಬೆಂಗಳೂರು prajakiran.com : ಸರಿಯಾದ ಮಾಸ್ಕ್ ಧರಿಸದ ರೈತನಿಗೆ ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಕಾರಿನಲ್ಲಿ ಕನಕಪುರದ ಕಂಚನಹಳ್ಳಿಯಿಂದ ಸಂಬಂಧಿಕರ ಆರೋಗ್ಯ ವಿಚಾರಿಸಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಮಗನ ಕ್ಲಾಸ್ ಆನ್ ಲೈನ್ ನಲ್ಲಿ ನಡೆಯುತ್ತಿದ್ದ ವೇಳೆ ಸ್ವಲ್ಪ ಮಾಸ್ಕ ಸರಿಸಿದ್ದರಿಂದ ಈ ಯಡವಟ್ಟು ಆಗಿದೆ.
ಈ ಬಗ್ಗೆ ಬಿಬಿಎಂಪಿ ಮಾರ್ಷಲ್ ಗಳಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಚಕಾರ ಎತ್ತುತ್ತಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಸಾವಿರ ರೂಪಾಯಿ ತೆಗೆದುಕೊಳ್ಳುವುದು ನಮ್ಮ ಒಂದು ವಾರದ ಕೂಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ಬೇಸತ್ತ ರೈತ ಕುಟುಂಬ ರಾಜ್ಯ ಸರಕಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ಹಗಲು ದರೋಡೆ ಸರಕಾರ, ಈ ರೀತಿ ರೈತರ ಹಣ ಕೊಳ್ಳೆ ಹೊಡೆಯುವುದು ಸರಿಯಲ್ಲ ಎಂದು ಕನಕಪುರದ ಕಂಚನಹಳ್ಳಿ ರೈತ ಶಪಿಸಿದರು.