ಧಾರವಾಡ prajakiran.com : ಹಿರಿಯ ಶಿಕ್ಷಕ, ಕೆ.ಇ. ಬೋರ್ಡ್ಸ್ ಸಂಸ್ಥೆಯಲ್ಲಿ ಸುಧೀರ್ಘ ೪೦ ವರ್ಷಗಳ ಕಾಲ ಶಿಷ್ಯ ವತ್ಸಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇಂದುಹಾಸ ರಾಮರಾವ್ ಜೇವೂರ ಬುಧವಾರ ಬೆಳಗಿನ ಜಾವ (ಅಕ್ಟೋಬರ್ ೭, ೨೦೨೦ ಬುಧವಾರ) ೨ ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಧಾರವಾಡದ ಮಾಳಮಡ್ಡಿಯ ನಾರಾಯಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಅವರು, ಪತ್ನಿ ರಂಗಭೂಮಿ ಕಲಾವಿದೆ, ಖ್ಯಾತ ನಾಟಕಕಾರ್ತಿ ಶ್ರೀಮತಿ ವಿಷಯಾ ಜೇವೂರ ಸೇರಿದಂತೆ, ಮಕ್ಕಳಾದ ವಿಕಾಸ, ಸುಹಾಸ ಮತ್ತು ಇಬ್ಬರು ಮೊಮ್ಮಕ್ಕಳು ಹಾಗೂ ಶಿಷ್ಯ ಬಳಗವನ್ನು ಅಗಲಿದ್ದಾರೆ.
ಧಾರವಾಡದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ, ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಪ್ರೇರಕ, ಪೋಷಕ ಮತ್ತು ಸಂಘಟನಾ ಶಕ್ತಿಯಾಗಿದ್ದ ಆದರ್ಶ ಮೇಷ್ಟ್ರು. ಸ್ವತಃ ರಂಗಭೂಮಿ ಕಲಾವಿದರೂ ಅವರಾಗಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು.
ಧಾರವಾಡದ ಹೊಸಯಲ್ಲಾಪುರದ ದಹನಕ್ರಿಯಾ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೨ ಗಂಟೆಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜರುಗಲಿದೆ.