ಧಾರವಾಡ prajakiran.com : ಧಾರವಾಡ ತಾಲೂಕಿನ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಧಾರವಾಡ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಹರವಲಯದ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.
ತಾಲೂಕಿಗೆ ಬಂದ ಪ್ರಥಮ ಆದಿತ್ಯ ಭಟ್ (೬೨೦ ಅಂಕ) ಬಾಲಬಳಗ ಸೃಜನ ಶೀಲ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಅಂಕಿತ ಪಾಟೀಲ (೬೧೯ ಅಂಕ) ಕೆ ಇ ಬೋರ್ಡ್ ಆಂಗ್ಲ ಮಾಧ್ಯಮ ಶಾಲೆ, ತೃತೀಯ ಎಸ್ ಧರಣಿ (೬೧೮ ಅಂಕ) ಪವನ ಆಂಗ್ಲ ಮಾಧ್ಯಮ ಶಾಲೆ ಈ ಮೂರು ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎ ಖಾಜಿ ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಶಹರ ವಲಯದ ಬ್ಲಾಕಿನ ಫಲಿತಾಂಶ ಬಿ ಗ್ರೇಡ್ ಆಗಿದ್ದು ಒಟ್ಟು ೯ ಶಾಲೆಗಳು ಎ ಗ್ರೇಡ್, ೧೯ ಶಾಲೆಗಳು ಬಿ ಗ್ರೇಡ್ ಹಾಗೂ ೩೯ ಶಾಲೆಗಳು ಸಿ ಗ್ರೇಡ್ ಫಲಿತಾಂಶ ಪಡೆದಿವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ ವಿ ಅಡಿವೇರ, ಎಸ್ಎಸ್ಎಲ್ಸಿ ನೋಡಲ್ ಕೆ ಎಫ್ ಜಾವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.