ಮಾನ್ಯತೆ ರದ್ದು ಮಾಡುವ ಎಚ್ಚರಿಕೆ
ಎಂಆರ್ಪಿ ದರ ರೂ.೨೬೬ ಗಿಂತ ಹೆಚ್ಚಿನ ದರಕ್ಕೆ ಮಾರುವಂತಿಲ್ಲ
ಧಾರವಾಡ prajakiran.com : ಜಿಲ್ಲೆಯ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಸಲು ಕ್ರಮಕೈಗೊಳ್ಳಲಾಗಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಎಂ.ಸಿ.ಎಫ್. ಕಂಪನಿಯ ಯೂರಿಯಾ ರಸಗೊಬ್ಬರವನ್ನು ಆಗಸ್ಟ್ ೧೩ ರಂದು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿ ಮತ್ತು ಸಹಕಾರಿ ಸಂಸ್ಥೆಗಳಿಗೆ ಸುಮಾರು ೫೪೧ ಮೆ.ಟನ್ ರಸಗೊಬ್ಬರ ಪೂರೈಸಲಾಗಿದೆ.
ರಸಗೊಬ್ಬರ ಪೂರೈಕೆ ಕುರಿತು ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಅಥವಾ ತಹಶೀಲ್ದಾರ ಕಚೇರಿ ಸಹಾಯವಾಣಿಗಳಿಗೆ ಹಾಗೂ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ, ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ರೈತರು ಸಂಪರ್ಕಿಸಬಹುದು.
ಯೂರಿಯಾ ರಸಗೊಬ್ಬರವನ್ನು ಸರ್ಕಾರದ ನಿರ್ಧರಿತ ಎಂಆರ್ಪಿ ದರ ರೂ.೨೬೬-೫೦ ಮಾತ್ರ ನೀಡಿ ರೈತರು ಖರೀದಿಸಬೇಕು.
ಯಾವುದೇ ರೀತಿಯಿಂದ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬAದಲ್ಲಿ ರೈತರು ಅಥವಾ ಸಾರ್ವಜನಿಕರು ನೇರವಾಗಿ ಕೃಷಿ ಇಲಾಖೆ, ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬಹುದು.
ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಟ್ಟು ನಿಯಮ ಮೀರಿ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
ಅಂತಹ ಅಂಗಡಿಗಳ ಮಾನ್ಯತೆಯನ್ನು ರದ್ದುಗೊಳಿಸಿ ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.