ಹಾರೂಬೆಳವಡಿ ಬ್ರಿಡ್ಜ್ ಮತ್ತೇ ಸಂಪರ್ಕ ಕಡಿತ …!
ಧಾರವಾಡ Prajakiran.com : ನಿನ್ನೇ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.
ಹಾರೂಬೆಳವಡಿ ಬ್ರಿಡ್ಜ್ ಈ ಹಿಂದೆ ಭಾರೀ ಮಳೆಗೆ ಕಿತ್ತುಕೊಂಡು ಹೋಗಿತ್ತು. ಹೀಗಾಗಿ ಅದರ ನಿರ್ಮಾಣ ಕಾರ್ಯ ಮುಂದುವರೆದಿದೆ. ತಾತ್ಕಲಿಕ ರಸ್ತೆ ನಿರ್ಮಿಸಿ, ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದೀಗ ಕಳೆದ 12ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೇ ಸಂಪರ್ಕ ಕಡಿತಗೊಂಡಿದೆ.
ಈ ಕುರಿತು ಮಾಹಿತಿ ಖಚಿತ ಪಡಿಸಿರುವ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಭಾರೀ ಮಳೆಯಿಂದ ಹಳೆಯ ರಸ್ತೆ ಮುಳುಗಿದ್ದು, ಸಾರ್ವಜನಿಕರು ಪ್ರಯಾಣಿಸಬಾರದು ಎಂದು ಮನವಿ ಮಾಡಿದ್ದಾರೆ.