ಬೆಂಗಳೂರು prajakiran.com : ಕನ್ನಡ ವಾಟಾಳ್ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ ಅವರ ಧರ್ಮಪತ್ನಿ ಜ್ಞಾನಾಂಬಿಕೆ (60ವರ್ಷ) ಕಿಡ್ನಿ ವೈಫಲ್ಯದಿಂದ ಆ. 4 ರ ಮಂಗಳವಾರ ಸಂಜೆ 7-30 ಗಂಟೆಗೆ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನ ರಾತ್ರಿ ವಾಟಾಳ್ ನಾಗರಾಜ್ ಅವರ ಸ್ವಗೃಹ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು.
ಬುಧವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ 16 ಗ್ರಾಮದ ಜಮೀನಿನಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.