ಬೆಂಗಳೂರು prajakiran.com : ಕರೋನಾದಿಂದ ಕಂಗೆಟ್ಟ ಕರುನಾಡಿನ ಜನತೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ 10 ತಿಂಗಳ ನಂತರ ರಾಜ್ಯದ ಎಲ್ಲಾ ಕಡೆ ಶಾಲೆಗಳು ಹಿಂದಿನಂತೆ ಆರಂಭಗೊಂಡಿವೆ.
ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಮಕ್ಕಳಿಗೆ ಹೂವು ನೀಡಿ ಶಾಲೆಗೆ ಬರಮಾಡಿಕೊಂಡು ಸಂತಸ ಹಂಚಿಕೊಂಡರು.
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.
ಅಲ್ಲದೆ,ಕೊವೀಡ್ 19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಟಿಪ್ಸ್ ನೀಡಿದರು.
ಮಕ್ಕಳ ಜೊತೆಗೆ ಸಚಿವ ಸುರೇಶ್ ಕುಮಾರ್ ಸಮಾಲೋಚನೆ ನಡೆಸಿ, ಕುಂದು ಕೊರತೆ ಆಲಿಸಿದರು.