ಚಿಕ್ಕೋಡಿ prajakiran.com : ನಿನ್ನೆ ಎಲೆಕ್ಷನ್ ರಿಸಲ್ಟ್ ಬಂದಿದ್ದೆ ಬಂದಿದ್ದು ಗೆದ್ದ ಅಭ್ಯರ್ಥಿಗಳು ಫುಲ್ ಖುಷಿಯಲ್ಲಿ ವಿಜಯೋತ್ಸವ ಮಾಡಿದ್ರೆ ಇತ್ತ ಸೋತ ಅಭ್ಯರ್ಥಿಗಳು ಮನೆ ಹಿಡ್ಕೊಂಡು ಕೂತ್ಕೊಂಡಿದ್ದಾರೆ.
ಆದರೆ ಬೆಳಗಾವಿ ಜಿಲ್ಲೆಯಲ್ಲಿ
ವಿಜಯೋತ್ಸವ ಮಾಡಿದ ಬೆನ್ನಲ್ಲೇ ನೆತ್ತರು ಹರಿದಿದೆ.
ಗೆದ್ದ ಅಭ್ಯರ್ಥಿಯ ಮನೆಯವರ ಬಲಿ ಪಡೆದರು ಸೋತ ಅಭ್ಯರ್ಥಿಯ ಮನೆಯವರು ಎನ್ನುವಂತೆ ಆಗಿದೆ.
ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆನೇ ಹಾಗೆ ಅನ್ನುವ ಪರಿಸ್ಥಿತಿಯನ್ನು ನಿರ್ಮಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಎಲೆಕ್ಷನ್ ಕಾವು ಜೋರಾಗಿತ್ತು.
ಬಶೀರ್ ಮುಲ್ಲಾ ಪೆನಲ್ ೧೦ ಸ್ಥಾನ ಗೆದ್ದಿದೆ. ಈ ಹಿಂದೆ ಗೆಲ್ಲುತ್ತ ಬಂದಿದ್ದ ಶಬ್ಬೀರ ಮುಲ್ಲಾ ಪೆನಲ್ ಠೇವಣಿ ಕಳೆದುಕೊಂಡಿದೆ. ಹೀಗಾಗಿ ವಿಜಯೋತ್ಸವ ನಡೆಸುತ್ತಿದ್ದ ಬಶೀರ ಮನೆಯವರ ಮೇಲೆ ಶಬ್ಬೀರ ಮುಲ್ಲಾ ಕುಟುಂಬದವರು ಕಾಲ್ಕೆರೆದು ಜಗಳ ಮಾಡಿದ್ದಲ್ಲದೆ, ಗೆದ್ದ ಅಭ್ಯರ್ಥಿಯ ಅಣ್ಣನ ಕೊಲೆ ಮಾಡಿದ್ದಾರೆ.
ಜಗಳ ಕೇವಲ ಮಾತಿಗಷ್ಟೆ ಸೀಮಿತವಾಗದೆ ಕೈಲಿ ಕೋಲು,ರಾಡ್,ಹರಿತವಾದ ಕತ್ತಿ ಹಿಡಿಯುವರೆಗೆ ಬಂದು ಬಿಟ್ಟಿದೆ.
ಈ ಘಟನೆಯಲ್ಲಿ ಗೆದ್ದ ಅಭ್ಯರ್ಥಿ ಬಶೀರ್ ಮುಲ್ಲಾ ಸಹೋದರ ಶಾನೂರ ಮುಲ್ಲಾ ಕೊಲೆಯಾಗಿ ಹೋಗಿದ್ದಾನೆ.
ಸುಲ್ತಾನಪುರ ಗ್ರಾಮದಲ್ಲಿ ಕಳೆದ ೧೦ ವರ್ಷಗಳಿಂದ ಕೇವಲ ಶಬ್ಬೀರ ಪೆನಲ್ ವಿನ್ ಆಗ್ತಾ ಇತ್ತು.
ಗೆದ್ದು ಬಂದ ಮೇಲೆ ಗ್ರಾಮದಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ.
ಹೀಗಾಗಿ ಈ ಬಾರಿ ಬಶೀರ್ ಅವರ ಪೆನಲ್ ಎಲೆಕ್ಷನ್ ಗೆ ನಿಂತು ಬರೊಬ್ಬರಿ ೧೦ ಸ್ಥಾನ ಗೆಲ್ಲೊದ್ರಲ್ಲಿ ಯಶಸ್ವಿಯಾಗಿತ್ತು.
ಬಶೀರ್ ಟೀಂನವರು ಪಕ್ಕದ ಗ್ರಾಮ ಬಸಾಪುರಕ್ಕೆ ಹೋಗಿ ಸಂಬಂಧಿಕರಿಗೆ ಸ್ವೀಟ್ ನೀಡಿ ಬಂದಿದ್ದಾರೆ.
ಇವರು ಸ್ವೀಟ್ ನೀಡಿ ಬಂದ ವಿಷಯ ಸೋತ ಶಬ್ಬೀರ ಮನೆಯವರಿಗೆ ತಿಳಿದಿದ್ದೆ ತಡ ಏಕಾಏಕಿ ಬಶೀರ ಮನೆ ಮುಂದೆ ಬಂದು ಶಬ್ಬೀರ ಬೆಂಬಲಿಗರು ದಾಂದಲೇ ಶುರುಮಾಡಿದ್ದಾರೆ.
ಇವರಿಗೆ ಬುದ್ದಿ ಹೇಳಿ ಕಳಿಸೋಕೆ ಮನೆಯಿಂದ ಹೊರಬಂದ ಶಾನೂರ ಅವರನ್ನ ಎಳೆದ ಶಬ್ಬೀರ ಮನೆಯವರು ಏಕಾಏಕಿ ಶಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡೋಕೆ ಶುರು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಪಟ್ಟಂತೆ ಇದ್ದಕ್ಕೆ ಸಂಭಂದಿಸಿದಂತೆ ಹುಕ್ಕೇರಿ ಪೊಲೀಸರು ೬ ಜನರನ್ನು ಬಂಧಿಸಿದ್ದು, ಜಹಾಂಗೀರ ಮುಲ್ಲಾ, ಸುಲ್ತಾನಸಾಬ ಮುಲ್ಲಾ, ಹಸನಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸಿಪ್ ಮುಲ್ಲಾ, ಮೋಸಿನ್ ಖಾಜಿ ಎಂಬ ೬ ಜನರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಹೋದರ ಸಂಬಂಧಿಗಳೇ ಬಡಿದಾಡಿಕೊಂಡು ಒಂದು ಪ್ರಾಣಕ್ಕೆ ಸಂಚಕಾರ ತಂದಿದ್ದರಿಂದ ಕಂಬಿಯ ಹಿಂದೆ ಹೋಗುವಂತೆ ಆಗಿದೆ.