ಜಿಲ್ಲೆ

ಧಾರವಾಡದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಬದಲಿಸಲು ಹೆಸ್ಕಾಂ ಭರವಸೆ

ಪ್ರಜಾಕಿರಣ.ಕಾಮ್ ವರದಿ ಫಲಶೃತಿ

ಧಾರವಾಡ prajakiran.com : ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಒಂದನೇ ಕ್ರಾಸ್ ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಹೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಜೀವವನ್ನು ಅಂಗೈಯಲ್ಲಿ ಹಿಡಿದು ಬದುಕುತ್ತಿರುವ ಕುರಿತು ಪ್ರಜಾಕಿರಣ.ಕಾಮ್ ನಿನ್ನೆಯಷ್ಟ ವರದಿ ಪ್ರಕಟಿಸಿತ್ತು.

24 ಗಂಟೆಗಳ ಒಳಗೆ ಸ್ಪಂದಿಸಿ, ನಿವಾಸಿಗಳಅಹವಾಲು ಆಲಿಸಿದ ಹೆಸ್ಕಾಂಗೆ ನಮ್ಮದೊಂದು ನಮನ.

 ಸಮಸ್ಯೆಯ ಗಂಭೀರತೆ ಅರಿತ ಧಾರವಾಡ ಸಬ್ ಡಿವಿಸನ್ 2  ಎಇಇ ದೇವರಾಜ ಹೆಗಡೆ ಅವರು ಮೇಲಾಧಿಕಾರಿಯ ಪರವಾನಿಗೆ ಪಡೆದು ಸಮಸ್ಯೆಗೆ ಪರಿಹಾರ ಮಾಡಲು ಅನುಮತಿ ಕೊಡಿ ಎಂದು ಹಿರಿಯ ಅಧಿಕಾರಿಗೆ ಮನವಿ  ಮಾಡಿದ್ರು.

ಧಾರವಾಡ ಹೆಸ್ಕಾಂ ಡಿವಿಸನ್ ಹೆಡ್ ಇಇ ಕಳಕಪ್ಪ ಪಾಗಿ ಅವರ ಗಮನಕ್ಕೆ ವಿಷಯ ಬಂದ ಕೂಡಲೇ ತೀವ್ರಗತಿಯಲ್ಲಿ ಸಮಸ್ಯೆ ಇದೆ. ಜೀವ ಹಾನಿ ಆಗುವುದಕ್ಕಿಂತ ಮೊದಲು ಪರಿಹರಿಸಿ ಎಂದುಕೆಳಹಂತದ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸಮಸ್ಯೆಗೆ ಸ್ಪಂದಿಸಿ ಎಂದ್ರು

ತಕ್ಷಣ ಎಇಇ ದೇವರಾಜ ಹೆಗಡೆ ಅವರ ಮಾರ್ಗದರ್ಶನದಂತೆ  ಸೆಕ್ಷನ್ ಆಫೀಸರ್ ಗೋವಿಂದ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ  ಸಮಸ್ಯೆಯ ಗಂಭೀರತೆಯನ್ನು ಪರಿಶೀಲನೆ ನಡೆಸಿದ್ರು.

ಸ್ಥಳಕ್ಕೆ ಬಂದ ಅಧಿಕಾರಿಗಳು ತ್ವರಿತಗತಿಯಲ್ಲಿ ಆದಷ್ಟು ತೀವ್ರಗತಿಯಲ್ಲಿ ಬಾಗಿರುವ ವಿದ್ಯುತ್ ಕಂಬ ಸರಿ ಮಾಡುವುದರ ಜೊತೆಗೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿ ಮಾಡಲಾಗುವ ಭರವಸೆ ನೀಡಿದ್ರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *