ಧಾರವಾಡ prajakiran.com : ಕರೋನಾ ವೈರಸ್ ಯಾರಿಗೆ, ಯಾವಾಗ ಮತ್ತು ಹೇಗೆ ಹರಡುತ್ತದೆ ಎಂಬುದು ಬಹು ದೊಡ್ಡ ಸವಲಾಗಿರುವುದು ಎಲ್ಲರಿಗೂ ತಿಳಿದಿದೆ. ಸ್ವಲ್ಪ ಯಾಮಾರಿದರೂ ವಕ್ಕರಿಸುವುದು ಖಚಿತ ಎಂಬಂತಾಗಿದೆ.
ಅದೇ ರೀತಿ ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕರೋನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದ್ದು, ಜನತೆಯನ್ನು ಆತಂಕಕ್ಕೆ ಸಿಲುಕಿಸಿದೆ.
ಧಾರವಾಡದ ವಿಜಯನಗರದಲ್ಲಿ ಸೋಮವಾರ ಪತ್ತೆಯಾದ ಪ್ರಕರಣ ಪಾತ್ರೆ ತೊಳೆಯುವ ಮಹಿಳೆಗೂ ಕರೋನಾ ಬಂದಿರುವುದು ಜನತೆಯನ್ನು ಬೆಚ್ಚಿಬಿಳಿಸಿದೆ.
ಸೋಂಕಿತ ಮಹಿಳೆ ಡಿಡಬ್ಲ್ಯೂಡಿ ೨೦೨-ಪಿ-೯೧೬೧ (೩೫ ವರ್ಷದ ಮಹಿಳೆ), ಇವರು ಧಾರವಾಡ ವಿಜಯನಗರ ಮಾವಿನತೋಪು ಹತ್ತಿರದ ನಿವಾಸಿಯಾಗಿದ್ದಾರೆ.
ಇವರು ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಎಲ್ಐ) ಬಳಲುತ್ತಿದ್ದರು. ಆಗ ಆಸ್ಪತ್ರೆಗೆ ದಾಖಲಾದಾಗ ಇವರಿಗೆ ಸೋಂಕು ಇರುವುದು ಪತ್ತೆಯಾಗಿದೆ.
ಇವರಿಗೆ ಈ ಮಹಾಮಾರಿ ಹೇಗೆ ಬಂತು ಎಂಬುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದೆ. ಜೊತೆಗೆ ಇವರು ಓಡಾಡಿದ ಮನೆಗಳು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವನ್ನು ಕೂಡ ಸಂಗ್ರಹಿಸುತ್ತಿದೆ.
ಅವರ ಗಂಟಲು ದ್ರವ ಮಾದರಿ ಹಾಗೂ ರಕ್ತ ತಪಾಸಣೆ ನಡೆಸಿ, ಅವರನ್ನು ಕ್ವಾರಂಟಿನ್ ಮಾಡಲಾಗುತ್ತಿದೆ.
ಇವರು ಕೆಲಸ ಮಾಡುತ್ತಿದ್ದಅನೇಕ ಮನೆಯವರು ಕೂಡ ಇದೀಗ ಇವಳಿಂದ ನಮಗೇನಾದರೂ ಕರೋನಾ ಸೋಂಕು ಹರಡಿದೆಯಾ ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಧಾರವಾಡ ಜಿಲ್ಲಾಡಳಿತ ವಿಜಯನಗರದ ಮಾವಿನತೋಪು ಸುತ್ತಮುತ್ತ 100 ಮೀಟರ್ ಸೀಲ್ ಡೌನ್ ಮಾಡಿದ್ದು, 200 ಮೀಟರ್ ನಿರ್ಬಂಧಿತ ಪ್ರದೇಶವೆಂದು ಘೋಷಿಸಿದೆ.
ಇವಳಿಂದ ಇನ್ನೇಷ್ಟು ಜನರಿಗೆ ಧಾರವಾಡದಲ್ಲಿ ಕರೋನಾ ಹರಡುತ್ತದೆ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.