ಆಧ್ಯಾತ್ಮ

ಧಾರವಾಡದ ಮೃತ್ಯುಂಜಯ ನಗರ, ನಾರಾಯಣಪುರ ನಿವಾಸಿ ಸೇರಿ ಜಿಲ್ಲೆಯ 7 ಜನ ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು  ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಆ ಮೂಲಕ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3728 ಕ್ಕೆ ಏರಿದೆ. ಇದುವರೆಗೆ 1654 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.

1958 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 116ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. 

ಮೃತ ಸೋಂಕಿತರನ್ನು

ಹುಬ್ಬಳ್ಳಿ ನೇಕಾರ ನಗರ ನಿವಾಸಿ ಪಿ-94157 (56,ಪುರುಷ), 

 ಧಾರವಾಡ  ಮೃತ್ಯುಂಜಯ ನಗರ ನಿವಾಸಿ ಪಿ-94633 (60,ಪುರುಷ), 

ಹುಬ್ಬಳ್ಳಿ ಪಗಡಿ ಓಣಿ ನಿವಾಸಿ ಪಿ-69570 (75,ಪುರುಷ),

ಹುಬ್ಬಳ್ಳಿ ಭೈರಿದೇವರಕೊಪ್ಪ ನಿವಾಸಿ ಪಿ-86221 (68, ಮಹಿಳೆ),

ಹುಬ್ಬಳ್ಳಿ ಸಿದ್ಧನಪೇಟ ನಿವಾಸಿ ಪಿ-85988 (98, ಪುರುಷ),

ಧಾರವಾಡ ನಾರಾಯಣಪುರ ನಿವಾಸಿ ಪಿ-86081 (68, ಮಹಿಳೆ),.

ಹುಬ್ಬಳ್ಳಿ ಸಿದ್ಧಾರೂಢ ಮಠದ ಹತ್ತಿರ ನಿವಾಸಿ   73481 (26, ಮಹಿಳೆ),

ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.

ಚಿಕಿತ್ಸೆ ಫಲಿಸದೆ ಅವರು ಜಿಲ್ಲೆಯ ನಿಯೋಜಿತ ಕೋವಿಡ್ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.

ಹೀಗಾಗಿ ಕೋವಿಡ್  ನಿಯಮಾನುಸಾರ ಎಳು ಜನರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *