ಧಾರವಾಡ prajakiran.com : ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡವೊಂದು ಕುಸಿದ ಘಟನೆ ಧಾರವಾಡದಲ್ಲಿ ಗುರುವಾರ ನಡೆದಿದೆ.
ಧಾರವಾಡದ ಪಂಚ ಕಚೇರಿ ಓಣಿಯ ಸೆಂಟ್ರಲ್ ಸ್ಕೂಲ್ ಮಳೆಯಿಂದ ಗೂಡೆ ಕುಸಿದು ಹಾನಿಯಾಗಿದೆ. ಈ ಶಾಲಾ ಕಟ್ಟಡವನ್ನು 1929 ರಲ್ಲಿ ನಿಮಿ೯ಸಲಾಗಿತ್ತು.
ಕರೂನಾ ಹಿನ್ನಲೆಯಲ್ಲಿ ಶಾಲೆಗೆ ರಜೆಯಿದ್ದ ಪರಿಣಾಮ ಭಾರೀ ದುರಂತವೊಂದು ತಪ್ಪಿದ್ದು, ನೂರಾರು ಮಕ್ಕಳಿಗೆ ಜೀವದಾನ ನೀಡಿತ್ತಂದರೆ ತಪ್ಪಾಗಲಾರದು.
ಮಾಹಿತಿ ಅರಿತು ರಜೆಯಲ್ಲಿದ್ದರೂ ಘಟನಾ ಸ್ಥಳಕ್ಕೆ ದೌಡಾಯಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಎ.ಎ. ಖಾಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿದ ಅವರು, ಧಾರವಾಡದ ಗಾಂಧಿಚೌಕ ಸಕ೯ಲ್ ನಿಂದ ಹೊಸಯಸ್ಲಾಪೂರಗೆ ಹೋಗುವ ರಸ್ತೆ ಸೆಂಟ್ರಲ್ ಸ್ಕೂಲ್ ನಂ 1 ರಲ್ಲಿ ಈ ಅವಘಡ ಸಂಭವಿಸಿದೆ.
ಈ ಕಟ್ಟಡವನ್ನು ಈ ಹಿಂದೆ ತೆರವು ಮಾಡಲು ಶಿಫಾರಸ್ಸು ಮಾಡಲಾಗಿತ್ತು. ಹಳೆಯ ಕಟ್ಟಡವಿರುವುದರಿಂದ ಕುಸಿದಿದೆ.
ಈಗಾಗಲೇ ಶಾಲೆಗೆ ಹೊಸ ಕಟ್ಟಡವಿರುವುದರಿಂದ ಹೊಸ ಕೊಠಡಿಗೆ ಪ್ರಸ್ತಾಪ ಸಲ್ಲಿಸಿಲ್ಲ. ಆದಷ್ಟು ಬೇಗನೇ ಶಾಲೆಯ ಉಳಿದ ಅವಶೇಷಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿದರು.