ಧಾರವಾಡ prajakiran.com : ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಸಚಿವ ಉಮೇಶ ಕತ್ತಿಗೆ ಡಿಸಿಎಂ ಅಶ್ವಥ್ ನಾರಾಯಣ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಅವರು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಉಮೆಶ ಕತ್ತಿ ಮುಂದಿನ ಸಿಎಂ ಉತ್ತರ ಕರ್ನಾಟಕದವರು ಆಗುತ್ತಾರೆ ಎಂಬ ವಿಚಾರವಾಗಿ ಈ ಪ್ರತಿಕ್ರಿಯೆ ವ್ಯಕ್ತವಾಯಿತು
ಸಿಎಂ ಆಗಿ ಬಿ ಎಸ್ ವೈ ಇರೋವರೆಗೂ ಯಾವುದು ಚರ್ಚೆ ಆಗಲ್ಲ,
ಅವರೆ ಅವಧಿ ಮುಗಿಯುವರೆಗೂ ಸಿಎಂ ಆಗಿ ಮುಂದೆವರೆಯುತ್ತಾರೆ ಎಂದರು.
ಕನ್ನಂಬಾಡಿ ಆಣೆಕಟ್ಟು ಬಿರುವ ಬಿಟ್ಟ ವಿಚಾರ ಮುಗಿದ ಹೋದ ಅಧ್ಯಾಯ
ಅವರ ಮಾತಿನ ಯುದ್ದ ಮಗಿದು ಹೋಗಿದೆ. ಸದ್ಯ ವರದಿ ಪ್ರಕಾರ ಬಿರುಕು ಬಿಟ್ಟಿಲ್ಲ ಎಂದರು.
ಭ್ರಷ್ಟಾಚಾರ ಏನೇ ಇದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ, ಭ್ರಷ್ಟಾಚಾರ ಅನ್ನೋದನ್ನ ತಂದವರು ಕಾಂಗ್ರೆಸ್ ಪಕ್ಷದವರು.
ಅವರು ನಮ್ಮ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಎಲ್ಲಿ ಭ್ರಷ್ಟಾಚಾರ ಆಗಿದೆ ಎಂಬುದನ್ನ ತೋರಿಸಲಿ ಎಂದು ಸವಾಲು ಹಾಕಿದ ಅವರು ಭ್ರಷ್ಟಾಚಾರಿಗಳಿಗೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ,
ನಮ್ಮ ಪಕ್ಷದಲ್ಲಿ ಯಾರು ಆರ್ ಟಿ ಜಿ ಎಸ್ ಮಾಡಿಕೊಳ್ಳುವುದಿಲ್ಲ ಎಂದು ತಿರುಗೇಟು ಕೊಟ್ಟರು.
ರಮೇಶ ಜಾರಕಿಹೊಳಿ ಅವರು ನಮ್ಮ ನಾಯಕರು, ನಮ್ಮ ಸಚಿವರು ಆಗಿದ್ದವರು
ರಮೇಶ ಜಾರಕಿಹೊಳಿ ಅವರು ಆಪಾದನೆಯಿಂದ ಮುಕ್ತರಾಗಿ ಬರುತ್ತಾರೆ ಎಂದು ಧಾರವಾಡದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು