ಧಾರವಾಡ prajakiran.com : ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ. ಮುಂದೇ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೇ, ಸುಮ್ಮನಿರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತಸಿದ್ಧ ಎಂದು ಹೇಳಿದರು.
ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ.
ನನಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮಾಡಿಲ್ಲ. ನನಗೂ ಮುಖ್ಯಮಂತ್ರಿ ಆಗವ ಆಸೆ ಇದೆ ಎಂದರು.
ಈಗ ನನಗೆ 60 ವರ್ಷ, ಮುಂದಿನ 20 ವರ್ಷ ಕಾಯ್ತೆನೆ. 80 ವರ್ಷ ಆಯುಷ್ಯ. ಸಾಧ್ಯ ವಾದರೆ ಪ್ರಧಾನಿ ಆಗುವ ಆಸೆ ಇದೆ ಎಂದು ಹೇಳಿದರು
ಮುಂದಿನ ಮುಖ್ಯಮಂತ್ರಿ ಬೆಲ್ಲದ ಆಗಬಹುದು. ಯಾಕ್ ಆಗಬಾರದು ಎಂದು ಬೆಲ್ಲದ ಪರ ಬ್ಯಾಟ್ ಬೀಸಿದರು.
ಬೆಲ್ಲದ, ನಿರಾಣಿ ಅಥವಾ ನಾನೇ ಆಗಬಹುದು ಎನ್ನುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತು ಸುಳಿವು ನೀಡಿದರು.