ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ನಾಲ್ವರು ಹಾಗೂ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ತಲಾ ಒಬ್ಬರು ಸೇರಿ ಒಟ್ಟು ಆರು ಜನ ಕಳೆದ ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಮರಣವನ್ನಪ್ಪಿದ್ದವರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ನಿವಾಸಿ ಪಿ-94968 (50,ಪುರುಷ) ಹಾಗೂ ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ನಿವಾಸಿ ಪಿ- 83417 (78, ಮಹಿಳೆ) ಸಾವನ್ನಪ್ಪಿದ್ದಾರೆ.
ಧಾರವಾಡ ಟೋಲ್ ನಾಕಾ ನಿವಾಸಿ ಪಿ-68237 (60, ಮಹಿಳೆ), ಹುಬ್ಬಳ್ಳಿ ಮಂಟೂರ ರಸ್ತೆಯ ಕೃಪಾ ನಗರದ ಅರಳಿಕಟ್ಟಿ ಕಾಲೋನಿ ನಿವಾಸಿ ಪಿ-76884 (64 ,ಪುರುಷ) , ಪಿ-95177 (64, ಮಹಿಳೆ) ಹುಬ್ಬಳ್ಳಿಯ ಕರ್ಕಿಬಸವೇಶ್ವರ ನಗರ ನಿವಾಸಿ. ಹಳೆಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿ ಪಿ-95121 (72, ಮಹಿಳೆ) ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ಕೋವಿಡ್ -19 ನಿಯಮಾನುಸಾರ ಜಿಲ್ಲೆಯ ನಾಲ್ಕು ಹಾಗೂ ಅನ್ಯ ಜಿಲ್ಲೆಯ ಇಬ್ಬರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.