ಧಾರವಾಡ prajakiran.com : ಧಾರವಾಡದ ಮಾನಸಿಕ ಹಾಗೂ ನರರೋಗ ಆಸ್ಪತ್ರೆ ಕಳೆದ ಹಲವು ದಿನಗಳಿಂದ ಗೊಂದಲದ ಗೂಡಾಗಿದೆ.
ವಿನಾಕಾರಣ ಮಾನಸಿಕ ರೋಗಿಯನ್ನಾಗಿ ಮಾಡಿ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಧಾರವಾಡದ ಮಾನಸಿಕ ಆಸ್ಪತ್ರೆ ವೈದ್ಯರ ವಿರುದ್ಧ ದೂರು ದಾಖಲಿಸಿರುವುದು ಆರೋಪ ಪ್ರತ್ಯಾರೋಪ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಚೆನ್ನೈ ನಿವಾಸಿಯಾಗಿರೋ ಕಲೈ ಸೆಲ್ವಿ ದೂರು ದಾಖಲು ಮಾಡಿದ ಮಹಿಳೆ. ಕಳೆದ 17 ತಿಂಗಳುಗಳಿಂದ ಕಲೈ ಸೆಲ್ವಿ ಡಿಮ್ಹಾನ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈಕೆಗೆ ಸುಂದರರಾಜನ್ ಎಂಬಾತ ಹುಚ್ಚಿಯನ್ನಾಗಿ ಮಾಡಿ ಡಿಮ್ಹಾನ್ಸ್ ದಾಖಲಿಸಿದ್ದ.
ಅವನೊಂದಿಗೆ ಸೇರಿ ಡಿಮ್ಹಾನ್ಸ್ ವೈದ್ಯರು ವಿನಾಕಾರಣ ಮಾನಸಿಕ ರೋಗಿಯೆಂದು ಪರಿಗಣಿಸಿ
ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಹೈಕೋರ್ಟ್ ಮೊರೆ ಹೋಗಿರುವ ಸೆಲ್ವಿ ಡಿಮ್ಹಾನ್ಸ್ ನಿಂದ ಹೊರಗೆ ಬಂದಿದ್ದು, ಈಗ ಧಾರವಾಡದ ಉಪನಗರ ಠಾಣೆಯಲ್ಲಿ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ವೈದ್ಯಾಧಿಕಾರಿಗಳಾದ ರಾಘವೇಂದ್ರ ನಾಯಕ ಹಾಗೂ ರಂಗನಾಥ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದಾಳೆ.
ದೂರು ದಾಖಲು ಆಗ್ತಾ ಇದ್ದಂತೆ ಡಿಮ್ಹಾನ್ಸ್ ಸಿಬ್ಬಂದಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.
ಇದು ಡಿಮ್ಹಾನ್ಸ್ ಹೆಸರು ಕೆಡಿಸುವ ಹುನ್ನಾರವಾಗಿದ್ದು, ಸರ್ಕಾರ ಮಧ್ಯ ಪ್ರವೇಶ ಮಾಡಿ ನಿರಾಂತಕವಾಗಿ ಕೆಲಸ ಮಾಡಲು ಅವಕಾಶ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿದ್ಯಮಾನಗಳ ಕುರಿತು ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಪ್ರತಿಕ್ರಿಯೆ ನೀಡಿದ್ದು, ಸಾವಿರಾರು ಜನ ಬರ್ತಾರೆ. ಚಿಕಿತ್ಸೆ ಪಡೆಯುತ್ತಾರೆ. ನಮ್ಮ ಕೆಲಸವನ್ನು ನಾವು ಚೆನ್ನಾಗಿ ಮಾಡಿಕೊಂಡು ಹೊರಟಿದ್ದೇವೆ.
ಆದ್ರೆ ನಮ್ಮಲ್ಲಿಯೇ ಇರೋ ಕೆಲವರು ಕಲೈ ಸೆಲ್ವಿ ಬಳಸಿಕೊಂಡು, ದೂರುಗಳು ದಾಖಲಾಗುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು, ಡಿಮಾನ್ಸ್ ವೈದ್ಯರು ಪ್ರತಿಭಟನೆ ಹಾದಿ ಹಿಡಿದ್ದಿದ್ದು ಯಾವ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕು.