ಧಾರವಾಡ Prajakiran.com : ಧಾರವಾಡದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಮದಿಹಾಳದ ಶಿವಗಂಗಾ ನಗರ, ಕಮತಿ ಪ್ಲಾಟ್ ನಿವಾಸಿಗಳು ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮದಿಹಾಳ ಸೇರಿದಂತೆ ಧಾರವಾಡ ನಗರದಾದ್ಯಂತ ವಿವಿಧ ಕಡೆಗಳಲ್ಲಿ ಕಳ್ಳತನ ಹೆಚ್ಚುತ್ತಿವೆ.
ಈ ಹಿನ್ನೆಲೆಯಲ್ಲಿ ಕಮತಿ ಪ್ಲಾಟ್ ಹಾಗೂ ಶಿವಗಂಗಾ ನಗರದ ನಿವಾಸಿಗಳು ಭಯಗೊಂಡಿದ್ದಾರೆ.
ಕೂಡಲೇ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಭದ್ರತೆ ಕಲ್ಪಿಸಬೇಕು.
ನಮ್ಮ ಮನೆಗಳಿಗೆ ಭದ್ರತೆ ಒದಗಿಸಬೇಕು ಹಾಗೂ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ಈ ಬಡಾವಣೆ ನಗರದ ಹೊರ ವಲಯದಲ್ಲಿ ಇರುವುದರಿಂದ ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಬೀದಿ ದೀಪ ಹಾಗೂ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಿ ಭಯದ ವಾತಾವರಣ ದೂರ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಕಾಶ ಅಕ್ಕಿಮರಡಿ, ಬಸವರಾಜ ದೇಶಮನಿ, ಗಣೇಶ ಕಠಾರೆ, ಶರೀಫ್, ಶಬ್ಬೀರ್, ಅಲಿ ಬೆಟಗೇರಿ ಸೇರಿದಂತೆ ಮದಿಹಾಳ ಶಿವಗಂಗಾ ನಗರ, ಕಮತಿ ಪ್ಲಾಟ್ ನಿವಾಸಿಗಳು ಭಾಗವಹಿಸಿದ್ದರು.