ಧಾರವಾಡ prajakiran.com : ರಾಜ್ಯದಲ್ಲಿ ಈಗಾಗಲೇ ಶೇ. ೯೫ರಷ್ಟು ಬೆಳೆ ಸಮೀಕ್ಷೆ ಮುಗಿದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಅವರು ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಇಲ್ಲಿತನಕ ೨.೧೫ ಕೋಟಿ ಬೆಳೆ ಸಮೀಕ್ಷೆ ಆಗಿದೆ. ಈ ವರ್ಷ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಿದ್ದೇವೆ ಎಂದರು.
ಈಗಾಗಲೇ ಶೇ. ೯೫ರಷ್ಟು ಸಮೀಕ್ಷೆ ಮಾಡಿದೆ. ಮತ್ತೇ ಯಾವುದೇ ಸಮೀಕ್ಷೆ ಮಾಡುವುದಿಲ್ಲ ಎಂದರು.
ಕಳೆದ ಸೋಮವಾರ ವಿಮಾ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ೨೦೧೬ರಿಂದ ೨೦೨೦ರವರೆಗೆ ಎಲ್ಲ ವಿಮೆಗಳ ಕ್ಲಿಯರ್ ಆಗುತ್ತವೆ ಎಂದು ವಿವರಿಸಿದರು.
ಕೆಲವೊಂದು ತಾಂತ್ರಿಕ ತೊಂದರೆಗಳಿಂದ ರೈತರಿಗೆ ವಿಮೆ ಹಣ ಸಿಕ್ಕಿರಲಿಲ್ಲ. ಅಂತಹವರಿಗೆ ಚೆಕ್ ಮೂಲಕ ಪರಿಹಾರ ಕೊಡಲು ಕಂಪನಿಗಳಿಗೆ ಸೂಚಿಸಲಾಗಿದೆ.
ಇದಕ್ಕೆ ಎಲ್ಲಾ ಇನ್ಸೂರೆನ್ಸ್ ಕಂಪನಿಗಳು ಒಪ್ಪಿಕೊಂಡಿವೆ ಎಂದು ಸಚಿವ ಬಿ.ಸಿ.ಪಾಟೀಲ ಉತ್ತರಿಸಿದರು.