ಧಾರವಾಡ prajakiran.com : ಧಾರವಾಡದ ನುಗ್ಗಿಕೇರಿ ಕಲ್ಲಂಗಡಿ ಹಣ್ಣಿನ ಧ್ವಂಸ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆ ನಡೆಯಬಾರದಿತ್ತು. ಆದರೆ ಇದು ಯಾಕೆ ಆಗುತ್ತಿದೆ ಅಂತಾನೂ ವಿಚಾರ ಮಾಡಬೇಕಿದೆ ಎಂದು ಕುಟುಕಿದರು.
ಘಟನೆ ಆಗೋಕೆ ಕಾರಣವಾದ ವಿಷಯಗಳ ಬಗ್ಗೆ ನೋಡಬೇಕಿದೆ. ಹೈಕೋರ್ಟ್ ಹಿಜಾಬ್ ಬಗ್ಗೆ ತೀರ್ಪು ಕೊಟ್ಟಿತ್ತು.
ಶಾಲೆಗಳಲ್ಲಿ ಸಮವಸ್ತ್ರ ಅಂತಾ ತೀರ್ಪು ಆಗಿತ್ತು. ಅದಕ್ಕೆ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ್ದವು. ಆಗ ಕಾನೂನಿಗೆ ಗೌರವ ಇಲ್ಲ ಅಂತಾ ಗೊತ್ತಾಯ್ತು ಅಂತಾ ಹೇಳಿದರು.
ಇನ್ನು ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ ಅಂತಾ ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರವಿ ಅವರು ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಮುಸ್ಲಿಂ ಸಮಾಜದ ನಾಯಕರು ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್ಗೆ ರಿಯಾಕ್ಷನ್ ಆಗುತ್ತದೆ ಎಂದರು.
ನುಗ್ಗಿಕೇರಿ ಖಾಸಗಿ ದೇವಸ್ಥಾನ.
ಅಲ್ಲಿ ಯಾರ ಅಂಗಡಿ ಇರಬೇಕು ಅನ್ನೋದು ಆಡಳಿತ ಮಂಡಳಿಗೆ ಬಿಟ್ಟಿದ್ದು ಎಂದ ಅವರು ಅದು ಹಿಂದೂ ದೇವಸ್ಥಾನ. ಅಲ್ಲಿ ಮುಸ್ಲಿಂ ವ್ಯಾಪಾರಿ ಇದ್ದರೂ ಯಾವ ವೇಷದಲ್ಲಿರಬೇಕು? ಎಂಬ ಅರಿವು ಇರಬೇಕು ಎಂದು ಸಲಹೆ ನೀಡಿದರು.
ತಲೆ ಮೇಲೆ ಟೋಪಿ ಹಾಕಿಕೊಂಡು, ಗಡ್ಡ ಬಿಟ್ಟುಕೊಂಡು ಇರೋದು. ಮೀಸೆ ಬೋಳಿಸಿಕೊಂಡಿ, ಪಾಯಿಜಾಮ್ ಹಾಕಿಕೊಂಡು ಇದ್ದರೆ ಹೇಗೆ? ಆಗ ಹಿಂದೂ ಭಕ್ತಾದಿಗಳಿಗೆ ಏನು ಅನ್ನಿಸುತ್ತೆ? ಎಂದು ಪ್ರಶ್ನಿಸಿದರು.
ಒಂದು ಕಡೆ ಅದೇ ಮುಸ್ಲಿಂ ಕಾನೂನು ವಿರೋಧಿಸುತ್ತಾರೆ. ಮತ್ತೊಂದೆಡೆ ದೇವಸ್ಥಾನಕ್ಕೆ ವ್ಯಾಪಾರಕ್ಕೆ ಬರುತ್ತಾರೆ.
ಹೀಗೆ ಆದರೆ ಭಕ್ತರಿಗೆ ಮುಜುಗರ ಅನ್ನಿಸುತ್ತೆ ಅಲ್ವಾ? ಎಂದು ಹೇಳಿದರು.
ಸಮಾಜದಲ್ಲಿ ಈಗ ಎರಡೂ ಕಡೆ ವಿಚಾರ ಮಾಡಬೇಕಿದೆ. ಒಂದೇ ಕೈಯಿಂದ ಚಪ್ಪಾಳೆ ಆಗೋದಿಲ್ಲ.
ಎರಡು ಕೈ ಸೇರಿಸಿಯೇ ಚಪ್ಪಾಳೆ ಆಗಬೇಕು. ಹಾಗಂತ ನಾನು ಗಲಾಟೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಇದಕ್ಕೆ ಆಳಕ್ಕೆ ಹೋಗಿ ಪರಿಹಾರ ಕಂಡುಕೊಳ್ಳಬೇಕಿದೆ
ಸಮಾಜವೇ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕಿದೆ. ಮುಸ್ಲಿಂ ಸಮಾಜದ ನಾಯಕರು ತಪ್ಪು ಆದಾಗ ತಪ್ಪು ಅಂತಾ ಹೇಳಬೇಕಿದೆ ಎಂದರು.
ಹೈಕೋರ್ಟ್ ತೀರ್ಪಿಗೆ ಬಂದ್ ಮಾಡಿಸಿದ್ದರು. ಆಗ ಹೇಳಬೇಕಿತ್ತಲ್ಲವೇ? ಅದಕ್ಕೆ ಇದು ರಿಯಾಕ್ಷನ್ ಆಗಿದೆ. ಹುಚ್ಚು ಹುಡುಗರು ಹೋಗಿ ಹಾಗೆ ಮಾಡಿದ್ದಾರೆ.
ಅದಕ್ಕೆ ಪ್ರಚೋದನೆ ಆಗಿದ್ದೇನು?
ಅದನ್ನು ಮೊದಲಿಗೆ ನೋಡಬೇಕು ಅಂತಾ ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ
ಹೇಳಿದರು