ಧಾರವಾಡ prajakiran.com : ರಾಜ್ಯಾದ್ಯಂತ ಕರೋನಾ ಅವಾಂತರಗಳು ಬೆಳಕಿಗೆ ಬರುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಈವರೆಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ಅದರಲ್ಲೂ ಆರೋಗ್ಯ ಇಲಾಖೆಯ ಯಡವಟ್ಟುಗಳು ಒಂದರ ನಂತರ ಒಂದು ಬಟಾಬಯಲು ಆಗುತ್ತಲೇ ಇವೆ.
ಇಂತಹದೇ ಒಂದು ನಿರ್ದಶನ ಧಾರವಾಡದ ಕೋವಿಡ್ ಆಸ್ಪತ್ರೆಯಲ್ಲೂ ನಡೆದಿದ್ದು, ರಾತ್ರಿಯಿಡಿ ಅಲ್ಲಿ ಯಾವೊಬ್ಬ ಸಿಬ್ಬಂದಿಯಿಲ್ಲದೆ ಇದ್ದರಿಂದ ಕರೋನಾ ಸೋಂಕಿತರು ಪರದಾಡಿದ್ದಾರೆ.
ಧಾರವಾಡದ ಗರಗ ರಸ್ತೆಯಲ್ಲಿಯುವ ಸಿ.ಬಿ. ಗುತ್ತಲ ಆಯುರ್ವೇದ ಕಾಲೇಜಿನಲ್ಲಿ ನಿನ್ನೇ ರಾತ್ರಿ ವೇಳೆ ಈ ನಿರ್ಲಕ್ಷ್ಯತನ ನಡೆದಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಈ ಕಾಲೇಜ್ ನಲ್ಲಿ ಕೋವಿಡ್ ಸೋಂಕಿತರನ್ನು ಇರಿಸಲಾಗಿದ್ದು, ಇಲ್ಲಿ ರಾತ್ರಿಯ ವೇಳೆಯಲ್ಲಿ ಯಾವೊಬ್ಬ ಸಿಬ್ಬಂದಿ ಇರಲಿಲ್ಲ. ಜೊತೆಗೆ ರಾತ್ರಿಯಿಡಿ ವಿದ್ಯುತ್ ಸಂಪರ್ಕ ವಿಲ್ಲದ್ದರಿಂದ ಅವರೆಲ್ಲ ಆತಂಕದಲ್ಲಿಯೇ ರಾತ್ರಿಯನ್ನು ಕಳೆದಿದ್ದಾರೆ.
ಈ ಬಗ್ಗೆ ತಮ್ಮಅಸಮಾಧಾನ ಹೊರ ಹಾಕಿದ್ದು, ಧಾರವಾಡ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ವಲ್ಪ ನಿಗಾವಹಿಸಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದ್ದಾರೆ.