ಧಾರವಾಡ prajakiran.com : ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಧಾರವಾಡ ಜಿಲ್ಲೆಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ಆರೋಪಿಗಳಾದ ಎ 2 ಗಣೇಶ ಮಿಷ್ಕಿನ್ ,
ಎ 4 ವಾಸುದೇವ ಸೂರ್ಯವಂಶಿ ಹಾಗೂ
ಎ 6 ಅಮಿತ್ ಬದ್ದಿಯನ್ನು
ಮುಂಬೈ ಅರತರ್ ರೋಡ್ ಜೈಲಿನಿಂದ ಕರೆದುಕೊಂಡು ಬರಲಾಗಿತ್ತು.
ಕೊಲೆಯ ಆರೋಪಿ ಎ 3 ಪ್ರವೀಣ ಚತುರ್ ನನ್ನು ಧಾರವಾಡ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಕರೆದುಕೊಂಡು ಬಂದು ಹಾಜರು ಪಡಿಸಲಾಯಿತು.
ಧಾರವಾಡ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಿತು.
ಬಿಗಿ ಪೋಲಿಸ್ ಬಂದೂಬಸ್ತನಲ್ಲಿ ಕರೆತಂದಿದ್ದರು. ಈ ವೇಳೆ ಆರೋಪಿಯೊಬ್ಬ ನಾವು ಅಮಾಯಕರು ಎಂದು ಘೋಷಣೆ ಕೂಗಿ ಮಾಧ್ಯಮದ ಗಮನ ಸೆಳೆದ ಎನ್ನಲಾಗಿದೆ.