ರಾಜ್ಯ

ಧಾರವಾಡದ ಎಸಿಪಿ ಅನುಷಾ ಮೆಲೆ ಕೆರೋಸಿನ್ ಎರಚಿದ ಚೌಧರಿ ವಕೀಲ….!

ಸುಪರ್ ಮಾರ್ಕೆಟ್ ತೆರವು ಕಾರ್ಯಾಚರಣೆ ವೇಳೆ ಪೋಲೀಸ್ ಹಾಗೂ ವ್ಯಾಪಾರಸ್ಥರ ಮಧ್ಯ ವಾಗ್ವಾದ

ಧಾರವಾಡ prajakiran.com : ಧಾರವಾಡದ ಸುಪರ್ ಮಾರ್ಕೆಟ್ ತೆರವು ಕಾರ್ಯಾಚರಣೆ ವೇಳೆ ಪೋಲೀಸ್ ಹಾಗೂ ವ್ಯಾಪಾರಸ್ಥರ ಮಧ್ಯ ವಾಗ್ವಾದ ನಡೆದಿದೆ.

ಅನಧಿಕೃತ ಅಂಗಡಿಗಳನ್ನ ತೆರವಿಗೆ ಮುಂದಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಾಯಿತು.

ಅಂಗಡಿ ಗಳನ್ನ ತೆರವು ಮಾಡದಂತೆ ಅಂಗಡಿಕಾರರು ಪಟ್ಟು ಹಿಡಿದರು.
ನೋಟಿಸ್ ನೀಡಿ ಅಂಗಡಿ ತೆರವಿಗೆ ಮುಂದಾದ ಹುಬ್ಬಳ್ಳಿ-
ಧಾರವಾಡ ಮಹಾನಗರ ಪಾಲಿಕೆ ನಡೆಗೆ ಕಿಡಿಕಾರಿದ್ದಾರೆ.

ಈ ವೇಳೆ ಅವರ ಪರ ವಕೀಲರೊಬ್ಬರು ಕೆರೋಸಿನ್ ಸುರಿದುಕ್ಕೊಂಡು ಹೈಡ್ರಾಮಾ ಸೃಷ್ಟಿಸಿದರು.

ಅಲ್ಲದೆ,ಎಂ ಎಂ ಚೌಧರಿ ವಕೀಲ ಧಾರವಾಡ ಎಸಿಪಿ ಅನುಷಾ ಮೇಲೆಯೇ ಕೆರೋಸಿನ್ ಎರಚಾಟ ನಡೆಸಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.

ಎಸಿಪಿ ಅನುಷಾ ಅವರ ಮೈಮೇಲೆ ಕೆರೋಸಿನ್ ಹಾಕಿದ್ದ ವಕೀಲ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗಳ ತೆರವು ಕಾರ್ಯಾಚರಣೆಯನ್ನ ನಿಲ್ಲಿಸಿ ಎಂದು ವಕೀಲ ಚೌಧರಿ ಒತ್ತಾಯ ಮಾಡಿದರು.

ಇದಕ್ಕೆ ಸೊಪ್ಪು ಹಾಕದ ಹಿನ್ನೆಲೆಯಲ್ಲಿ
ಮೈ ಮೇಲೆ ಎಣ್ಣೆ ಸುರಿದುಕೊಂಡರು. ಆಗ ಅವರ ನಿಯಂತ್ರಣ ಕ್ಕೆ ಮುಂದಾದ ಎಸಿಪಿಗೂ ಸೀಮೆ ಎಣ್ಣೆ ಎರಚಲಾಯಿತು.

ಬಳಿಕ ವಕೀಲನನ್ನ ವಶಕ್ಕೆ ಪಡೆದುಕ್ಕೊಂಡು ಧಾರವಾಡ ಶಹರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *