ಧಾರವಾಡ prajakiran.com : ಧಾರವಾಡದ ಜೆಡಿಎಸ್ ಮುಖಂಡ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ಇತನ ವಿರುದ್ದ ನಿನ್ನೆಯಷ್ಟೇ ಅನುಮತಿ ಅತ್ತಿಗೇರಿ ಎಂಬುವರು ಪ್ರಕರಣ ದಾಖಲಿಸಿದ್ದರು.
ಧಾರವಾಡದ ಸತ್ತೂರಿನ ಬಳಿಯಿರುವ ಉದಯಗಿರಿಯಲ್ಲಿ ನಿನ್ನೇ ಶ್ರೀಕಾಂತ ಜಮನಾಳ ಈ ಮಹಿಳೆ ಜೊತೆಗೆ ಅನುಚಿತವಾಗಿ ವರ್ತಿಸಿದ್ದ.
ಅನುಮತಿ ಎಂಬ ಮಹಿಳೆಯನ್ನು ಈತ ನಡು ರಸ್ತೆಯಲ್ಲಿ ಹಿಡಿದು ಎಳೆದಾಡಿದ್ದ.
ಅಲ್ಲದೆ, ಬಲವಂತವಾಗಿ ಆಕೆಯ ಮನೆಗೆ ನುಗ್ಗಿ ದಾಂದಲೆ ಮಾಡಿದ್ದ.
ಆಕೆಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದ ಎಂದು ಆಕೆ ದೂರು ನೀಡಿದ್ದಳು.
ಶ್ರೀಕಾಂತ ಜಮನಾಳ ಅನುಮತಿಯನ್ನು ನಡುರಸ್ತೆಯಲ್ಲಿ ಹಿಡಿದು ಎಳೆದಾಡಿದ್ದ
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಅನುಮತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಬಸಾಪುರ ಅವರು ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನನ್ನ ಅರೆಸ್ಟ್ ಮಾಡಿದ್ದಾರೆ.
ಈ ಕುರಿತು ತನಿಖೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಿದ ನಂತರ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ಪ್ರಜಾಕಿರಣ. ಕಾಮ್ ಗೆ ಖಚಿತ ಪಡಿಸಿದರು.