follow/like: facebook.com/prajakirannews
ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಬರೋಬ್ಬರಿ 9 ಜನ ಸಾವನ್ನಪ್ಪಿದ್ದಾರೆ.
ಮತ್ತೆ ಹೊಸದಾಗಿ 416 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.
416ಸೋಂಕಿತರಲ್ಲಿ, 116 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ. 22 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಇಂದು ರಾಜ್ಯದಲ್ಲಿ181 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 5391 ಜನ ಗುಣಮುಖರಾಗಿದ್ದು, 3170 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶನಿವಾರವೂ 9 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 132ಕ್ಕೆ ಏರಿಕೆಯಾದಂತಾಗಿದೆ.
ಶನಿವಾರ ಪತ್ತೆಯಾದ 416ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರುನಗರ ದಲ್ಲಿಯೇ ಅತಿ ಹೆಚ್ಚು 94, ಬೀದರ 73, ಬಳ್ಳಾರಿ 38, ಕಲಬುರಗಿ 34,ಮೈಸೂರು 22 ಸೋಂಕಿತರು ಕಂಡು ಬಂದಿದ್ದಾರೆ.
ಇನ್ನೂಳಿದಂತೆ ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 5, ದಕ್ಷಿಣ ಕನ್ನಡ, ಮಂಡ್ಯ, ಉತ್ತರಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರ ತಲಾ 4, ದಾವಣಗೆರೆ 3, ಬಾಗಲಕೋಟೆ, ಶಿವಮೊಗ್ಗ, ಗದಗ, ತುಮಕೂರು ತಲಾ 2, ಬೆಳಗಾವಿ, ಚಾಮರಾಜನಗರ ತಲಾ ಒಂದು ಹೀಗೆಒಟ್ಟು 26 ಜಿಲ್ಲೆಗಳಲ್ಲಿ ಕರೋನಾ ವೈರಸ್ ಪ್ರಕರಣ ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶನಿವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 3 ಜನ ಸಾವನ್ನಪ್ಪಿದ್ದರೆ, ಬೀದರ 2, ಉಡುಪಿ, ಚಿಕ್ಕಮಗಳೂರ ಹಾಗೂ ದಾವಣಗೆರೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಪಿ-5996ನೇ ಸೋಂಕಿತ 46 ವರ್ಷದ ವ್ಯಕ್ತಿ, ಪಿ-8589 ಸೊಂಕಿತ 56ವರ್ಷದ ವ್ಯಕ್ತಿ, ಪಿ-8599 ಸೋಂಕಿತ 39 ವರ್ಷದ ಪುರುಷ, ದಾವಣಗೆರೆಯ ಪಿ-7208ನ ಸೋಂಕಿತ 90 ವರ್ಷದ ವೃದ್ದ, ಚಿಕ್ಕಮಗಳೂರು -7778 ನ ಸೋಂಕಿತ 72 ವರ್ಷದ ವೃದ್ದೆ, ಉಡುಪಿ-ಪಿ-8338 ನ ಸೋಂಕಿತ 54 ವರ್ಷದ ವ್ಯಕ್ತಿ, ಬೀದರನ ಪಿ-8423 ನ ಸೋಂಕಿತ 51 ವರ್ಷದ ಮಹಿಳೆ, ಪಿ-8424 ನ ಸೋಂಕಿತ 65 ವರ್ಷದ ವೃದ್ದ, ಇತರೆ 8648 ನ ಸೋಂಕಿತ 66 ವರ್ಷದ ವೃದ್ದೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.