ಉಡುಪಿ prajakiran.com : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ತೌಕ್ತೆ ಚಂಡಮಾರುತ ಪ್ರಭಾವ ಜಿಲ್ಲೆಯ ಪ್ರವಾಸಿ ತಾಣಗಳಿಗೂ ತಟ್ಟಿದೆ.
ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬೀಚ್ ಗಳು ಈಗ ನೀರಿನಿಂದ ತುಂಬಿವೆ.
ಪಶ್ಚಿಮ ಕರಾವಳಿಯಲ್ಲಿ ಸುರಕ್ಷಿತ ಬೀಚ್ ಎಂಬ ಹೆಸರು ಪಡೆದಿರುವ ಮಲ್ಪೆ ಕಡಲ ಕಿನಾರೆಯಲ್ಲಿ ನೀರು ತುಂಬಿಕೊಂಡಿದೆ.
ಸಮುದ್ರ ಹೆದ್ದಲೆಗಳು ರಭಸದಿಂದ ಬರುತ್ತಿದ್ದು, ಸುಮಾರು ಅರ್ಧ ಕಿ.ಮೀ. ಉದ್ದವಿರುವ ತಟ್ಟಾದ ಬೀಚ್ ನಲ್ಲಿ ಅಲೆಗಳಿಂದ ನೀರು ತುಂಬಿಕೊಂಡಿದೆ.
ಸದ್ಯ ಈಗ ಬೀಚ್ ರುದ್ರ ರಮಣೀಯವಾಗಿ ಕಾಣಿಸುತ್ತಿದೆ.
ಅದೇ ರೀತಿ ಕಾಪು ದೀಪಸ್ತಂಭದ ಬೀಚ್ ಬಳಿಯೂ ಕಡಲ ಅಲೆಗಳು ಕಿನಾರೆಯತ್ತ ಅಪ್ಪಳಿಸುತ್ತಿದ್ದು ಸುತ್ತಮುತ್ತಲ ಮರಳನ್ನು ಕೊರೆಯುತ್ತಿದೆ. ದೀಪಸ್ತಂಭಕ್ಕೆ ಹೋಗುವ ದಾರಿ ಸಂಪೂರ್ಣವಾಗಿ ಜಲಮಯವಾಗಿದೆ.