ಛತ್ತೀಸಗಢ Prajakiran.com : ಇಲ್ಲಿನ ಬಸ್ತಾರ್ ಪ್ರದೇಶದ 2 ಜಿಲ್ಲೆಗಳಲ್ಲಿ 13 ನಕ್ಸಲರು ಶಸ್ತ್ರ ತ್ಯಜಿಸಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
8 ನಕ್ಸಲರು ಸುಕ್ಮಾ ಜಿಲ್ಲೆಯಲ್ಲಿ ಹಾಗೂ 5 ಮಂದಿ ನಕ್ಸಲರು ದಂತೇವಾಡದಲ್ಲಿ ಸಿಆರ್ ಪಿಎಫ್ ಹಾಗೂ ಪೊಲೀಸರಿಗೆ ಶರಣಾಗಿದ್ದಾರೆ.
ರವಿ, ಕೋಸಾ, ದೇವಾ, ಡಿರ್ಡೋ ಗಂಗಾ, ಸೋಡಿ ದುಲಾ ಸೇರಿದಂತೆ 13 ಜನ ನಕ್ಸಲರು ಪೋಲಿಸರಿಗೆ ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.