ಗದಗ prajakiran.com : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ ಡಾ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯರಾಗಿದ್ದಾರೆ.
ಶ್ರೀ, ಡಾ, ಸಂಗನಬಸವ (ಅಭಿನವ ಅನ್ನದಾನೇಶ್ವರ) ಮಹಾ ಸ್ವಾಮಿಜಿ (೮೫)ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಕೊನೆ ಉಸಿರೆಳೆದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದ ಶಿವಯೋಗ ಮಂದಿರ ಅಧ್ಯಕ್ಷರು ಆಗಿದ್ದ ಸ್ವಾಮೀಜಿ
ಇದೇ ತಿಂಗಳು ಕಳೆದ ದಿನಾಂಕ ೮,೯,೧೦ ರಂದು ಮಠಕ್ಕೆ ನೂತನ ಚಿರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದರು.
ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ ಬಸವಲಿಂಗ ಸ್ವಾಮಿಜಿ ಪಟ್ಟಾಧಿಕಾರ ಮಾಡಿದ್ದರು.
ಶಿವಯೋಗ ಮಂದಿರ ಅಧ್ಯಕ್ಷರು, ಗದಗ, ಹಾಲಕೇರಿ, ಬಳ್ಳಾರಿ, ಹೊಸಪೇಟೆ ಅನೇಕ ಶಾಖಾ ಮಠಗಳು ಹಾಗೂ ಲಕ್ಷಾಂತರ ಭಕ್ತ ಸಮೂಹಶೋಕ ಸಾಗರದಲ್ಲಿ ಮುಳುಗಿದೆ
ಇಂದು ಮಧ್ಯಾಹ್ನ ಗದಗ ಜಿಲ್ಲೆ ಹಾಲಕೇರಿ ಗ್ರಾಮಕ್ಕೆ ಸ್ವಾಮಿಜಿ ಪಾರ್ಥಿವ ಶರೀರ ಬರಲಿದೆ.