ಬೆಂಗಳೂರು Prajakiran.com : ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಜೂ.13ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಚೆಸ್ ಆಟವಾಡಲಿದ್ದಾರೆ.
ಸಂಜೆ 5ಕ್ಕೆ ಈ ಪಂದ್ಯಗಳು ಆರಂಭವಾಗಲಿದ್ದು, ತಾರೆಯರು, ಉದ್ಯಮಿಗಳೊಂದಿಗೆ ಆನಂದ್ ಆಟವಾಡಲಿದ್ದಾರೆ.
ವಿಶೇಷವೆಂದರೆ ಈ ಪಂದ್ಯಗಳಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ಬಹುಭಾಷಾ ತಾರೆ, ಕರ್ನಾಟಕದ ಖ್ಯಾತ ನಟ ಕಿಚ್ಚ ಸುದೀಪ್ ಕೂಡಾ ಪಾಲ್ಗೊಳ್ಳಲಿದ್ದಾರೆ.
ಇವರೊಂದಿಗೆ ನಟ ರೀತೇಶ್ ದೇಶಮುಖ್, ಗಾಯಕ ಅರಿಜಿತ್ ಸಿಂಗ್, ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಯಜುವೇಂದ್ರ ಚಹಲ್, ಶಿಯೋಮಿ ಇಂಡಿಯಾದ ಸಿಇಒ ಮನುಕುಮಾರ್ ಜೈನ್, ಝೆರೊಧ ಸಹಸಂಸ್ಥಾಪಕ ನಿಖೀಲ್ ಕಾಮತ್, ನಿರ್ಮಾಪಕ ಸಾಜಿದ್ ನಾಡಿಯವಾಲ, ಪ್ರಚುರ ಪದಕಣ್ಣಯ್ಯ ಕೂಡಾ ಆಡಲಿದ್ದಾರೆ.
ಇದರ ಉದ್ದೇಶ ಕೊರೊನಾ ಪರಿಹಾರ ನಿಧಿಗೆ ಹಣ ಸಂಗ್ರಹಿಸುವುದು.
ಅಕ್ಷಯ ಪಾತ್ರಾ ಫೌಂಡೇಶನ್, ಚೆಸ್.ಕಾಮ್, ಎಕ್ಸ್ಸೆಟರಾ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಚೆಸ್.ಕಾಮ್ನ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.