ನವದೆಹಲಿ prajakiran.com : ಪಂಚರಾಜ್ಯ ಚುನಾವಣೆಯ ಫಲಿತಾಂಶ ಮೇ.2ರಂದು ಹೊರಬೀಳಲಿದೆ.
ಮತಎಣಿಕೆ ಕೇಂದ್ರಗಳಿಗೆ ಬರುವ ಅಭ್ಯರ್ಥಿಗಳು ಕೊರೋನಾ ನೆಗೆಟಿವ್ ವರದಿ ಅಥವಾ ಪೂರ್ಣ ಲಸಿಕೆ ಪಡೆದಿರುವ ವರದಿ ಪಡೆದಿರಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೊರೋನಾ ನಿಯಂತ್ರಣಕ್ಕೆ ಚುನಾವಣಾ ಆಯೋಗವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಮತಎಣಿಕೆ ಕೇಂದ್ರಕ್ಕೆ ಪ್ರವೇಶಿಸಲಿರುವ ಅಭ್ಯರ್ಥಿಗಳು ಹಾಗೂ ಏಟೆಂಟ್ ಗಳಿಗೆ ಕೊರೋನಾ ನೆಗಟಿವ್ ವರದಿ ಕಡ್ಡಾಯ ಮಾಡಿದೆ.
ಈಗಾಗಲೇ ಚುನಾವಣಾ ಆಯೋಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷಗಳ ವಿಜಯೋತ್ಸವಕ್ಕೆ ನಿರ್ಬಂಧ ಹೇರಿದ್ದು, ಇದೀಗ ಮತಎಣಿಕೆ ಕೇಂದ್ರದ ಎದುರು ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಿದೆ.