ಹುಬ್ಬಳ್ಳಿ prajakiran.com : ಹುಬ್ಬಳ್ಳಿ-ಧಾರವಾಡ ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಜನರ ಪ್ರಾಣ ರಕ್ಷಣೆಯಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆ. 5ರಂದು ಚಿಗರಿ ಬಸ್ ನಲ್ಲಿ ನವನಗರದ ಬ್ರಿಜ್ ಬಳಿ ಬರುತ್ತಿದ್ದಂತೆ ಚಾಲಕನಿಗೆ ತಲೆ ಸುತ್ತು ಬಂದಿದೆ. ತಕ್ಷಣ ಚಾಲಕನಿಗೆ ಬಸ್ ಚಾಲನೆ ಮಾಡಲು ಆಗಿಲ್ಲ.
ಆಗಅದನ್ನು ನಿಯಂತ್ರಣ ಮಾಡಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಚಾಲಕನ ಸೀಟ್ ನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳಾ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಆಗ ಕೆಲ ಪ್ರಯಾಣಿಕರು ಮುಂದೆ ಬಂದು ನೀರು ಕುಡಿಸಿ ಆರೈಕೆ ಮಾಡಿದ್ದಾರೆ.
ಬಸ್ ಚಾಲಕನ ಸಮಯ ಪ್ರಜ್ಷೆಯಿಂದಾಗಿ ಸರಿಯಾದ ಸಮಯಕ್ಕೆ ಬಸ್ ನಿಂತಿದೆ. ಇಲ್ಲದಿದ್ದರೆ ಬಸ್ ಬ್ರಿಜ್ ಕೆಳಗೆ ಬೀಳುವ ಸಾಧ್ಯತೆಗಳಿದ್ದವು.
ಇದರಿಂದಾಗಿ 40 ಜನರ ಪ್ರಾಣ ರಕ್ಷಣೆಯಾದಂತಾಗಿದೆ. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿ ಚಾಲಕನ ಸಮಯ ಪ್ರಜ್ಞೆಗೆ ಶರಣೆಂದಿದ್ದಾರೆ.