ಧಾರವಾಡ prajakiran.com :
ಕೊರೋನಾ ಮೂರನೇಯ ಅಲೆ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರುತ್ತಿದ್ದರೆ ಅವರದೆ ಪಕ್ಷದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕೊರೋನಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ.
ಧಾರವಾಡದ ಹಾರೂಬೆಳವಡಿಯಲ್ಲಿ ನಡೆದ ಚಕ್ಕಡಿ ಮೆರವಣಿಗೆಯಲ್ಲಿ ಶಾಸಕ ಅಮೃತ ದೇಸಾಯಿ ಭಾಗವಹಿಸಿದ್ದಾರೆ.
ಈ ವೇಳೆ ಸ್ವಾಗತಿಸಿಕ್ಕೊಂಡ ಗ್ರಾಮಸ್ಥರು ಸಾಮಾಜಿಕ ಅಂತರ ಮರೆತು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
ಜೊತೆಗೆ ಬಹುತೇಕ ಜನ ಮಾಸ್ಕ್ ಧರಿಸದಿರುವುದು
ಕಂಡು ಬಂದಿದೆ.
ಕರೋನಾ ನಿಯಮ
ಜನರಿಗೊಂದು ಶಾಸಕರಿಗೊಂದು ಇದೇಯಾ ಎಂದು ಪ್ರಶ್ನಿಸುವಂತಾಗಿದೆ.
ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ
ಕೊರೊನಾ ವಾರಿಯರ್ ಗೆ ಪ್ರಶಂಶನಾ ಪತ್ರ ಕೊಡಲು ಹೋದ ಶಾಸಕರೆ ಕರೋನಾ ಸೋಂಕಿನ ಬಗ್ಗೆ ಮೈ ಮರೆತಿದ್ದಾರೆ.
ಜನಸಾಮಾನ್ಯರಿಗೆ ಬೀಸಿ ತಾಕಿಸುವ ಅಧಿಕಾರಿಗಳು ಶಾಸಕರ ನಡೆಗೆವಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕಾದು ನೋಡೋಣ.