ರಾಜ್ಯ

ನವರಾತ್ರಿ ಪೂಜೆಯಲ್ಲಿ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಹಾಡಿಗೆ ಯದ್ವಾ ತದ್ವಾ ಕುಣಿದ ಅಂಬಾವನ ಶ್ರೀ

ಧಾರವಾಡ prajakiran.com : ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಅತ್ಯಂತ ಸರಳ ರೀತಿಯಲ್ಲಿ ಈ ಬಾರಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.

ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕರೋಕೆ ಮ್ಯೂಸಿಕ್ ಸಂಜೆಯಲ್ಲಿ ಸ್ವಾಮೀಜಿ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಹಾಡಿಗೆ ಯದ್ವಾ ತದ್ವಾ ಕುಣಿದು ಕುಪ್ಪಳಿಸಿದ ದೃಶ್ಯಗಳು ಇದೀಗ ವೈರಲ್ ಆಗುತ್ತಿದೆ.

ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಶ್ರೀ ಗಳೇ ಹೀಗೆ ಕುಣಿದು ಕುಪಳಿಸಿ ನೆರಿದಿದ್ದ ಭಕ್ತರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ದಸರಾ ಹಿನ್ನೆಲೆ ಅಂಬಾವನ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು, ಆದರೆ ಶನಿವಾರ ನಡೆದ ಕರೋಕೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ತಾನು ಸ್ವಾಮಿ ಅನ್ನುವುದನ್ನೇ ಮರೆತು ಹುಚ್ಚೆದ್ದು ಕುಣಿದಿದ್ದಾರೆ.

ಸದ್ಯ ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನ ನೀಡಬೇಕಿದ್ದ ಸ್ವಾಮಿಜಿಯೇ ಹೀಗೆ ಒಳ್ಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಹಾಡಿಗೆ ಯದ್ವಾ ತದ್ವಾ ಕುಣಿದು ಕುಪ್ಪಳಿಸದರೆ ಹೇಗೆ ಅನ್ನೋ ಪ್ರಶ್ನೆ ಸದ್ಯ ಜನರಲ್ಲಿ ಮೂಡುತ್ತಿದ್ದೆ.

ಈ ಹಿಂದೆ ಕೂಡ ಈ ಮಠದಲ್ಲಿ ಕೆಲವು ಅಕ್ರಮ ಚಟುವಟಿಕೆಗಳು ನಡೆದಿದ್ದವು ಎಂದು ಸತ್ತಲಿನ ಗ್ರಾಮಸ್ಥರು ಮಠಕ್ಕೆ ಹೋಗುವುದನ್ನ ನಿಲ್ಲಿಸಿ ಪ್ರತಿಭಟಿಸಿದ್ದರು.

ಒಟ್ಟಿನಲ್ಲಿ ಸಮಾಜ ಸುಧಾರಣೆ ಮಾಡಿ ಜನರನ್ನ ಸನ್ಮಾರ್ಗದಲ್ಲಿ ನಡೆಸಬೇಕಾದ ಮಠ ಮತ್ತು ಸ್ವಾಮೀಜಿ ಯೊಬ್ಬರು ಇಂತಹ ಕೆಟ್ಟ ಸಂಪ್ರದಾಯ ಗಳಿಗೆ ನಾಂದಿ ಹಾಡಿದ್ದು ಈ ಮಠದ ಭಕ್ತರಲ್ಲಿ ತೀವ್ರ ಮುಜುಗರವನ್ನುಂಟು ಮಾಡಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *