- ಹುಬ್ಬಳ್ಳಿ prajakiran.com ;
ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ
ಹುಬ್ಬಳ್ಳಿ ಹೊರವಲಯದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಹುಬ್ಬಳ್ಳಿಯ ಶೆರೆವಾಡ್ ಕ್ರಾಸ್ ಬಳಿಯ ವಿಭವ ಕಾರ್ಖಾನೆಯಲ್ಲಿ ಶಾಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಡೆತನದ
ವಿಭವ ಇಂಡಸ್ಟ್ರೀಸ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕ ನಿರ್ಮಾಣ ವಾಗಿತ್ತು.
ಕೆಲ ಕಾರ್ಮಿಕರು ಬೆಂಕಿ ಕಂಡು ಹೌಹಾರಿದರು. ಚೀರಾಟ, ಕೂಗಾಟ ಕೇಳಿಬಂದವು ಎನ್ನಲಾಗಿದೆ.
ಅವರನ್ನು ಸುರಕ್ಷಿತವಾಗಿ ಹೊರಗಡೆ ಕರೆತರಲಾಯಿತು ಎಂದು ಹೇಳಲಾಗಿದೆ.
ವಿಭವ ಮಾರ್ಕೆಟಿಂಗ್ 555 ಮಂಕಿ ಪೊರಕೆ, ಫೀನಾಯಿಲ್ ಉತ್ಪಾದನೆ ಮಾಡುವ ಕಾರ್ಖಾನೆ ಇದಾಗಿದೆ.
ಆಕಸ್ಮಿಕ ಬೆಂಕಿಯಿಂದಾಗಿ
ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ದಸರಾ ಹಬ್ಬದ ಪ್ರಯುಕ್ತ ಸೋಮವಾರ ಕಾರ್ಖಾನೆಗೆ ರಜೆ ಘೋಷಿಸಲಾಗಿತ್ತು.
ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸಿದರು.