ಧಾರವಾಡ prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ರಾಜ್ಯದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದರು. ಮಾತಿನುದ್ದಕ್ಕು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ರಬ್ಬರಸ್ಟ್ಯಾಂಪ್ ಮತ್ತು ಹೆಬ್ಬಟ್ಟು ರಾಜ್ಯಪಾಲ ಎಂದು ಜರಿದರು.
ಸರ್ಕಾರ ಶ್ರೀಮಂತರಿಗೆ ಮಣೆ ಹಾಕಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದ್ರು. ರಾಜ್ಯಪಾಲರು ಸರ್ಕಾರದ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ರು.
ರಾಜ್ಯದಲ್ಲಿ ಈಗ ಕಾಸಿದ್ದರೆ ಕೆಲಸ ಎಂಬಂತಾಗಿದೆ. ಪ್ರಧಾನಿ ಮೋದಿಯವರು ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ದಸ್ ( 10 ) ಪರ್ಸೆಂಟೇಜ ಸರ್ಕಾರ ಎಂದು ಹೇಳಿದ್ರು. ಬಿಜೆಪಿ ಸರ್ಕಾರ ಬಂದ ಮೇಲೆ ಸೋಲಾ ( 16 ) ಪರ್ಸೆಂಟೇಜ ಸರ್ಕಾರವಾಗಿತ್ತು.
ಈಗ 33 ಪರ್ಸೆಂಟೇಜ ಸರ್ಕಾರವಾಗಿದೆ ಎಂದು ಛೇಡಿಸಿದರು. ಯಾವುದೇ ಚರ್ಚೆ ಇಲ್ಲದೆ ಸರ್ಕಾರ ಮಸೂದೆಗಳನ್ನು ಪಾಸು ಮಾಡುತ್ತಿದ್ದು, ಬರಲಿರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಮಾರಿಹಬ್ಬ ಕಾದಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನವಲಗುಂದ ಮಾಜಿಶಾಸಕ ಎನ್.ಹೆಚ್. ಕೋನರಡ್ಡಿ ಸೇರಿದಂತೆ ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.