ರಾಜ್ಯ

ಧಾರವಾಡದಲ್ಲಿ ಉದ್ದು, ಹೆಸರು ಕಿತ್ತು ಹಾಕುತ್ತಿರುವ ಅನ್ನದಾತ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ‌ಬೆಳೆಯನ್ನು ರೈತರು ತಮ್ಮ ಜಮೀನುಗಳಲ್ಲಿ ಕಿತ್ತು ಹಾಕುತ್ತಿರುವ ದೃಶ್ಯ ಧಾರವಾಡದ ಕವಲಗೇರಿಯಲ್ಲಿ ಶುಕ್ರವಾರ ಕಂಡು ಬಂದಿದೆ.

ಕೈ ಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ನೀರು ಪಾಲಾಗಿದೆ. ಹೀಗಾಗಿ ಮೊಳಕಾಲು ಉದ್ದ  ಬೆಳೆದ ಉದ್ದು ಹಾಗೂ ಹೆಸರು ಬೆಳೆಯನ್ನು ಕಿತ್ತು ಹಾಕುವ ಮನಕಲಕುವ ದೃಶ್ಯ ಪ್ರಜಾಕಿರಣ.ಕಾಮ್ ಗೆ ದೊರೆತಿವೆ.

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರಾದ ಮಹಾದೇವಿ ಶಂಕ್ರಪ್ಪ ಸಿದ್ದನಾಳ ಅವರ ಕುಟುಂಬ ತಮ್ಮ ಜಮೀನಿನಲ್ಲಿ ಬಂದ ಬೆಳೆಗಳನ್ನು ಕಿತ್ತು ಹಾಕುತ್ತಿರುವ ಕುರಿತು ಬಹಳ ನೋವಿನಿಂದ ಹೇಳಿಕೊಂಡರು.

ಎರಡು ಎಕರೆ ಉದ್ದು, ಎರಡು ಎಕರೆ ಹೆಸರು ಬೆಳೆ ಹಾಳಾಗಿದೆ. ಅತಿಯಾದ ಮಳೆಯಿಂದ ಬೆಳೆಗಳಿಗೆ ಬೆಂಕಿ ರೋಗ ತಗುಲಿದೆ. ಹಿನ್ನೆಲೆ ರೈತರು ಬೆಳೆಗಳನ್ನು ಕಿತ್ತು ಬದುವಿಗೆ ಹಾಕುತ್ತಿದ್ದಾರೆ.

ಹೆಸರು, ಉದ್ದು ಬೆಳೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ರೈತರು ತಮ್ಮ ನೋವನ್ನುತೋಡಿ ಕೊಂಡರು. ಇನ್ನೆನು ಬೆಳೆ ಬರಬೇಕಿತ್ತು. ಆದ್ರೆ ಮಳೆಯಿಂದ ಬೆಳೆ ಹಾಳಾಗಿದೆ ಎಂದು ವಿವರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *