ಬೆಂಗಳೂರು prajakiran.com : ಹೊಲದಲ್ಲಿ ಇರಬೇಕಾದ ರೈತ ಬೀದಿಗಿಳಿದು ತನ್ನ ಹಕ್ಕಿಗಾಗಿ ಧ್ವನಿ ಎತ್ತಿದ್ದು, ಆಳುವ ಸರ್ಕಾರಗಳ ಕಾರ್ಯವೈಖರಿ, ರೈತ ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ರೈತರನ್ನು ಈ ದೇಶದ ಕೇವಲ ಉತ್ಪಾದಕರೆಂದು ಮಾತ್ರ ಪರಿಗಣಿಸಿ, ಬೆಲೆ ನಿಗದಿ ಮಾಡುತ್ತಾರೇ ಹೊರತು ಆತನೂ ಈ ದೇಶದ ಬಳಕೆದಾರ ಅನ್ನಾದಾತ.
ದೇಶದ ಬೆನ್ನೆಲುಬು, ರೈತರಿಗೆ ಸಂಕಷ್ಟ ಎದುರಾದರೆ ಅದು ದೇಶಕ್ಕೆ ಎದುರಾಗುವ ಸಂಕಷ್ಟ ರೈತ ರಾಜಕಾರಣದ ವಿಷಯ ವಸ್ತುವಲ್ಲ.
ದೇಶದ ನಾಗರಿಕರ ಜೀವನಾಡಿ. ರೈತರಿಗೆ ಬೇಡವಾದದ್ದು ಸರ್ಕಾರಕ್ಕೆ ಏಕೆ ಬೇಕು? ಎಂದು ಕಿಡಿ ಕಾರಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಪ್ರತಿಭಟಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ಕಾಂಗ್ರೆಸ್ ಭವನದ ಆವರಣದಲ್ಲಿ ಕೆಪಿಸಿಸಿಯಿಂದ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಪಕ್ಷ ನಾಯಕ ಎಸ್ .ಆರ್. ಪಾಟೀಲ, ಕಾರ್ಯಾಧ್ಯಕ್ಷ ಅಲೀಂ ಅಹಮದ್ ಮತ್ತಿತರರು ಹಾಜರಿದ್ದರು.