ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮೇ 23ರಂದು ದೃಢಪಟ್ಟಿರುವ ಕೋವಿಡ್ ಸೋಂಕಿತರಾದ ಪಿ- 1913 ,ಪಿ- 1942 , ಪಿ-1943 , ಪಿ-1944 ಹಾಗೂ ಪಿ- 1945 ಇವರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಿಸಿದ್ದಾರೆ.
ಪಿ- 1913 ಪ್ರಯಾಣ ವಿವರ :
ಇವರು ಧಾರವಾಡ ನಗರದ ನಿವಾಸಿಗಳಾಗಿರುತ್ತಾರೆ . ಮಾ. 10 ರಂದು ಇವರು ಮುಂಬೈಗೆ ಹೋಗಿರುತ್ತಾರೆ. ಮೇ 9 ರಂದು ಬಾಡಿಗೆ ಕಾರ್ ನಂ : ಎಂ ಹೆಚ್ – 02 ಇ ಆರ್ – 4057 ಮೂಲಕ ಮಧ್ಯಾಹ್ನ 2:30 ಕ್ಕೆ ಮುಂಬೈಯಿಂದ ಹೊರಟು ರಾತ್ರಿ 10:30 ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡಿದ್ದಾರೆ.ನಂತರ ಮೇ 10 ರಂದು ಬೆಳಗಿನ ಜಾವ 1 ಗಂಟೆಗೆ ಧಾರವಾಡ ತಲುಪಿರುತ್ತಾರೆ .
ಮೇ 10 ರಂದು ಅವರ ಮೊದಲ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ನಲ್ಲಿ ಇರಿಸಲಾಗಿರುತ್ತದೆ. ಮೊದಲ ಗಂಟಲು ದ್ರವ ಪರೀಕ್ಷೆ ನೆಗಟಿವ್ ಬಂದಿರುತ್ತದೆ.
ಮೇ 21 ರಂದು ಎರಡನೇ ಬಾರಿಗೆ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಮೇ 23 ರಂದು ಪಿ – 1913 ಇವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಪಿ- 1942, 1943 ,1944 ಹಾಗೂ 1945 ಇವರ ಪ್ರಯಾಣ ವಿವರ :
ಇವರು ಮಹಾರಾಷ್ಟ್ರದ ಮುಂಬಯಿ ನಗರದ ನಿವಾಸಿಗಳಾಗಿರುತ್ತಾರೆ . ಮೇ 20 ರಂದು ಕುಟುಂಬದ ಐದು ಜನ ಸದಸ್ಯರು ಹಾಗೂ ಇಬ್ಬರು ಸಂಬಂಧಿಕರು ಬಾಡಿಗೆ ಇನ್ನೋವಾ ಕಾರಿನಲ್ಲಿ ಮುಂಬಯಿಯಿಂದ ಬೆಳಗಿನ ಜಾವ 1:30 ಕ್ಕೆ ಹೊರಟು ಕರಾಡಿ ಮತ್ತು ಕೊಲ್ಲಾಪುರ ಮಾರ್ಗವಾಗಿ ಬೆಳಿಗ್ಗೆ 9:30 ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡಿದ್ದಾರೆ.
ಕಿತ್ತೂರು ಹತ್ತಿರದ ದಾಬಾದಲ್ಲಿ ಮಧ್ಯಾಹ್ನ 2:30 ಕ್ಕೆ ಊಟ ಮಾಡಿರುತ್ತಾರೆ . ನಂತರ ಸಂಜೆ 4:30 ಕ್ಕೆ ಧಾರವಾಡ ತಲುಪಿರುತ್ತಾರೆ . ಇಬ್ಬರು ಸಂಬಂಧಿಕರು ಅಂದೇ ವಾಪಸ್ ಮುಂಬಯಿಗೆ ಹಿಂದಿರುಗಿರುತ್ತಾರೆ . 5 ಜನ ಕುಟುಂಬ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ನಲ್ಲಿರಿಸಲಾಗಿರುತ್ತದೆ .
ಮೇ 23 ರಂದು ಪಿ- 1942 , ಪಿ-1943 , ಪಿ-1944 ಹಾಗೂ ಪಿ- 1945 ಅವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕರೋನಾ ಸೋಂಕು ತಗಲುವ ಸಾಧ್ಯತೆ ಇದ್ದು , ಆ ಎಲ್ಲ ವ್ಯಕ್ತಿಗಳು ಕೂಡಲೇ ಕರೋನ ಸಹಾಯವಾಣಿ 1077 ಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಅವರು ತಿಳಿಸಿದ್ದಾರೆ.